ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು ಟಾಡಾ ಕೋರ್ಟಿನಲ್ಲಿ ಸಿಬ್ಬಂದಿ ಕೊರತೆ
ಬೆಂಗಳೂರು : ಮೈಸೂರಿನ ಟಾಡಾ ಕೋರ್ಟಿನಲ್ಲಿ ಸಿಬ್ಬಂದಿ ಕೊರತೆ 170ಕ್ಕೇರಿದ್ದು, ಕೋರ್ಟ್ ಕಲಾಪಗಳು ಯಶಸ್ವಿಯಾಗಿ ನಡೆಯಲು ತೊಂದರೆಯಾಗಬಹುದು ಎಂಬ ಶಂಕೆಯನ್ನು ಕರ್ನಾಟಕ ಹೈಕೋರ್ಟ್ ವ್ಯಕ್ತ ಪಡಿಸಿದೆ.
ಬೆಂಗಳೂರು ಮೂಲದ ವಕೀಲ ಶ್ರೀರಾಮ್ ಬಾಬು ಅವರು ಟಾಡಾ ಬಂಧಿಗಳ ಬಿಡುಗಡೆ ಕುರಿತಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ವಿಷಯವನ್ನು ವಿಭಾಗೀಯ ನ್ಯಾಯಪೀಠ ವಿವರಿಸಿತು.
ನ್ಯಾಯಾಧೀಶ ಅಶೋಕ್ ಭಾನ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸ ರೆಡ್ಡಿಯನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಡಿಸೆಂಬರ್ ಆರರೊಳಗೆ ಕೋರ್ಟ್ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಕೋರ್ಟ್ ಮುಂದೆ ವಿವರಿಸುವಂತೆ ಹೇಳಿತ್ತು.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]