ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹರಪನಹಳ್ಳಿಯಲ್ಲಿ ಲಾರಿ ಮಗುಚಿ 7 ಸಾವು, 30 ಜನಕ್ಕೆ ಗಾಯ
ದಾವಣಗೆರೆ : ಲಾರಿಯಾಂದು ಮಗುಚಿ ಬಿದ್ದ ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತರಾಗಿ, 30 ಮಂದಿ ಗಾಯಗೊಂಡಿರುವ ಭೀಕರ ದುರಂತ ಇಲ್ಲಿಗೆ 55 ಕಿ.ಮೀ. ದೂರದ ಹರಪನಹಳ್ಳಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಮೃತರು ಚಿಕ್ಕಮಗಳೂರಿನ ಕಾಫಿ ತೋಟದ ನೌಕರರಾಗಿದ್ದರು. ಪ್ರತಿ ದಿನದಂತೆ ಹರಪನಹಳ್ಳಿಯ ಸುತ್ತಮುತ್ತಲ ಹಳ್ಳಿಗಳಿಂದ ಕೆಲಸಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ದಾವಣಗೆರೆ ಮತ್ತು ಹರಪನಹಳ್ಳಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಐಜಿಪಿ ಎ.ಆರ್.ಇನ್ಫ್ಯಾಂಟ್ ತಿಳಿಸಿದ್ದಾರೆ.
(ಯುಎನ್ಐ)
Story first published: Sunday, December 24, 2000, 5:30 [IST]