ಕೆ.ಆರ್.ನಗರದಲ್ಲಿ ದರೋಡೆ : 2.34 ಲ-ಕ್ಷ ಬೆಲೆಯ ನಗದು, ಚಿನ್ನ ಕಳವು
ಕೆ.ಆರ್.ನಗರ : ಪಟ್ಟಣ ಪ್ರದೇಶದ ಹೊರ ವಲಯದಲ್ಲಿನ ಒಂದು ಕಾನ್ವೆಂಟ್ ಶಾಲೆ ಮತ್ತು ಅದರ ಹಿಂದಿನ ಮನೆಗೆ ನುಗ್ಗಿ ಒಟ್ಟು 84 ಸಾವಿರ ರುಪಾಯಿ ನಗದು ಹಾಗೂ 1.5 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆಕೋರರ ತಂಡವೊಂದು ಕದ್ದು ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ.
ಮಧ್ಯರಾತ್ರಿ 1.45ರ ಸಮಯದಲ್ಲಿ ಶಾಲೆಯ ಹಿಂಬಾಗಿಲನ್ನು ದೊಡ್ಡ ಸೈಜುಗಲ್ಲುಗಳಿಂದ ಒಡೆದು ಒಳನುಗ್ಗಿ, ಅಲ್ಲಿದ್ದ 7 ಸಿಸ್ಟರ್ಗಳನ್ನು ದುಷ್ಕರ್ಮಿಗಳು ಬೆದರಿಸಿದ್ದಾರೆ. ಶಾಲಾ ಮಕ್ಕಳು ಕೊಟ್ಟಿದ್ದ ಶುಲ್ಕದ ಹಣ 24 ಸಾವಿರ ರುಪಾಯಿ ಕಿತ್ತುಕೊಂಡು, ಸಿಸ್ಟರ್ಗಳನ್ನೆಲ್ಲಾ ಶೌಚಾಲಯದಲ್ಲಿ ಕೂಡಿ ಹಾಕಿ ಇನ್ನೊಂದು ಕಳುವಿಗಾಗಿ ಹೊರ ನಡೆದಿದ್ದಾರೆ.
ಶಾಲೆಯ ಹಿಂಬದಿಯಲ್ಲೇ ಇರುವ ಲೋಹಿತ್ ಟೈಲ್ಸ್ ಕಾರ್ಖಾನೆಯ ಮಾಲೀಕ ಕೃಷ್ಣಮೂರ್ತಿ ಎಂಬುವರ ಮನೆಗೆ ಬಾಗಿಲು ಒಡೆದು ನುಗ್ಗಿ , ಅಲ್ಲೂ ತಮ್ಮ ಹಿಂದಿನ ಕಳುವಿನ ಧಾಟಿಯನ್ನೇ ಮುಂದುವರೆಸಿದ್ದಾರೆ. ಸುಮಾರು 60 ಸಾವಿರ ರುಪಾಯಿ ನಗದು, 1.5 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಸಿದುಕೊಂಡಿದ್ದಾರೆ. ನಂತರ ಕೃಷ್ಣ ಮೂರ್ತಿ ಅವರ ತಾಯಿ, ಪತ್ನಿ, ಭಾವಮೈದುನ ಹಾಗೂ ಇಬ್ಬರು ಮಕ್ಕಳನ್ನು ಶೌಚಾಲಯದಲ್ಲಿ ಬಂಧಿಸಿ ಪೇರಿ ಕಿತ್ತಿದ್ದಾರೆ. ದುಷ್ಕರ್ಮಿಗಳು ಕೃಷ್ಣಮೂರ್ತಿ ಅವರ ಪತ್ನಿಯ ಮಾಂಗಲ್ಯ ಸರವನ್ನೂ ಬಿಟ್ಟಿಲ್ಲ.
ಇಷ್ಟೆಲ್ಲಾ ಮುಗಿವ ಹೊತ್ತಿಗೆ ಬೆಳಗಿನ ಜಾವ 5 ಗಂಟೆ ಸಮೀಪಿಸಿದೆ. ಶೌಚಾಲಯದಿಂದ ಹೇಗೋ ತಪ್ಪಿಸಿಕೊಂಡ ಸಿಸ್ಟರ್ಗಳು ಸ್ಥಳೀಯ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ದರೋಡೆಕೋರರ ಪತ್ತೆಗೆ ಯತ್ನಿಸಿದರೂ, ಅವರ ಸುಳಿವು ಸಿಕ್ಕಿಲ್ಲ. ದರೋಡೆಕೋರರು ನಿಕ್ಕರ್ ಹಾಗೂ ಬನಿಯನ್ ತೊಟ್ಟಿದ್ದು, ತೆಲುಗು- ತಮಿಳು ಮಾತನಾಡುತ್ತಿದ್ದರೆನ್ನಲಾಗಿದೆ. ತನಿಖೆ ಮುಂದುವರೆದಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications