Get Updates
Get notified of breaking news, exclusive insights, and must-see stories!

ಸರ್ವಜ್ಞ ಪ್ರತಿಮೆಯನ್ನು ಮರೀನಾ ಬೀಚ್‌ನಲ್ಲೇ ಸ್ಥಾಪಿಸಲಿ- ರಾಣಿ ಸತೀಶ್‌

ಧಾರವಾಡ : ಸರ್ವಜ್ಞರ ಪ್ರತಿಮೆಯನ್ನು ಚೆನ್ನೈನ ಕಾರ್ಪೊರೇಷನ್‌ ಪಾರ್ಕ್‌ನ ಬದಲಿಗೆ ಮರೀನಾ ಕಡಲ ತಡಿಯಲ್ಲಿ ಸ್ಥಾಪಿಸುವಂತೆ ಕರ್ನಾಟಕ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ಸದ್ಯದಲ್ಲೇ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಮಂಗಳವಾರ ತಿಳಿಸಿದ್ದಾರೆ.

ತಮಿಳು ನಾಡಿನ ಸಂತ- ಸಾಹಿತಿ ತಿರುವಳ್ಳುವರ್‌ ಪ್ರತಿಮೆಯನ್ನು ಈಗಾಗಲೇ ಬೆಂಗಳೂರು ನಗರದಲ್ಲಿ ಸ್ಥಾಪಿಸಲಾಗಿದ್ದು, ಬಟ್ಟೆಯಿಂದ ಮುಚ್ಚಲಾಗಿದೆ. ಅದೇ ಸ್ಥಳದಲ್ಲಿ ಪ್ರತಿಮೆಯನ್ನು ್ನ ಅನಾವರಣಗೊಳಿಸಲಾಗುವುದು ಎಂದು ಸುದ್ದಿಗಾರರಿಗೆ ಅವರು ಹೇಳಿದರು.

ಶ್ರೀಶೈಲದಲ್ಲಿ ಅಕ್ಕ ಮಹಾದೇವಿ ಪ್ರತಿಮೆ ? : ಕರ್ನಾಟಕದಿಂದ ಶ್ರೀಶೈಲಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜೊತೆ ಚರ್ಚಿಸಿದ್ದೇವೆ. ತನ್ನ ಜೀವನದ ಕೊನೆಯನ್ನು ಶ್ರೀಶೈಲದಲ್ಲೇ ಕಂಡಿದ್ದಾರೆ ಎನ್ನಲಾಗಿರುವ ವಚನಗಾರ್ತಿ ಅಕ್ಕ ಮಹಾದೇವಿ ಅವರ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸುವಂತೆ ಚರ್ಚೆಯ ವೇಳೆ ನಾಯ್ಡು ಅವರಿಗೆ ಮನವಿ ಮಾಡಿದ್ದೇವೆ ಎಂದರು.

ಹೊಸ ಸಂಸ್ಕೃತಿ ನೀತಿ : ಕರ್ನಾಟಕದ ಅಕಾಡೆಮಿಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಸದ್ಯದಲ್ಲೇ ಹೊಸ ನೀತಿಯನ್ನು ಜಾರಿಗೆ ತರಲಾಗುವುದು. ಈ ನೀತಿಯಿಂದ ಪ್ರಸ್ತುತ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾಣದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ವತೋಮುಖ ಪ್ರಗತಿ ಸಾಧ್ಯವಾಗಲಿದೆ. 38 ಸಂಪುಟಗಳ ‘ದಾಸ ಸಾಹಿತ್ಯ’ವು ಮುದ್ರಣದ ಹಂತದಲ್ಲಿದ್ದು, ಜನವರಿ 15ರ ಹೊತ್ತಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+