ಶಸ್ತ್ರಧಾರಿ ಡಕಾಯಿತರಿಂದ ಕಾನ್ವಂಟ್ ಮತ್ತು ಮನೆ ಡಕಾಯಿತಿ
ಮೈಸೂರು : ಆರು ಮಂದಿಯಿದ್ದ ಶಸ್ತ್ರಧಾರಿ ಡಕಾಯಿತರ ತಂಡ ಒಂದು ಕಾನ್ವೆಂಟ್ ಮತ್ತು ಮನೆಯಲ್ಲಿ ಡಕಾಯಿತಿ ನಡೆಸಿ ನಗದು ಹಣ ಮತ್ತು 1.2 ಲಕ್ಷ ರುಪಾಯಿಗಳಷ್ಟು ಬೆಲೆ ಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವ ಘಟನೆ ಸಮೀಪದ ಕೆ. ಆರ್. ನಗರದಲ್ಲಿ ಮಂಗಳವಾರ ನಡೆದಿದೆ.
ಪಿಸ್ತೂಲ್ ಮತ್ತು ಚಾಕುಗಳನ್ನು ಹೊಂದಿದ್ದ ಡಕಾಯಿತರು ಕಾನ್ವೆಂಟ್ನ ನನ್ಗಳನ್ನು ಬೆದರಿಸಿ 40 ಸಾವಿರ ನಗದಿನೊಂದಿಗೆ ಪರಾಯಿಯಾಯಿತು. ನಂತರ ಫ್ಯಾಕ್ಟರಿಯ ಮಾಲೀಕನ ಮನೆಯಾಂದಕ್ಕೆ ನುಗ್ಗಿದ ತಂಡ, ಆಭರಣಗಳನ್ನು ಒಪ್ಪಿಸುವಂತೆ ಬೆದರಿಕೆ ಹಾಕಿತು ನಂತರ ಮನೆಯಲ್ಲಿದ್ದ 60 ಸಾವಿರ ಹಣದೊಂದಿಗೆ ಪರಾರಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ಕಲ್ಲು ತೂರಾಟ : ಬಸ್ ಡಿಕ್ಕಿ ಹೊಡೆದು 12 ವರ್ಷದ ಬಾಲಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಮೂರು ಖಾಸಗಿ ಬಸ್ ಹಾಗೂ ತಮಿಳುನಾಡಿಗೆ ಸೇರಿದ ಒಂದು ಸರಕಾರಿ ಬಸ್ಗಳಿಗೆ ಹಾನಿಯಾಗಿದೆ.
ಮೈಸೂರಿಗೆ ಸಮೀಪವಿರುವ ಮಂಜುನಾಥಪುರದಲ್ಲಿ ಈ ಘಟನೆ ನಡೆದಿದ್ದು, ಸೈಕಲ್ ಮೇಲೆ ಬರುತ್ತಿದ್ದ ಬಾಲಕನಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಆತ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ. ಇದರಿಂದ ಉದ್ರಿಕ್ತ ಗೊಂಡ ಹಳ್ಳಿಗರು ಕಲ್ಲು ತೂರಾಟ ನಡೆಸಿದರು. ಬಸ್ ಚಾಲಕನನ್ನು ಬಂಧಿಸಲಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(ಯುಎನ್ಐ)