ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಪಾನಿನ ಶಾಂತಿ ಸಮ್ಮೇಳನಕ್ಕೆ ಗಂಜೀಫ ಭಟ್ಟರು
ಮೈಸೂರು : ರಾಷ್ಟ್ರ ಪ್ರಶಸ್ತಿ ವಿಜೇತ ಗಂಜೀಫ ಕಲಾವಿದ ರಘುಪತಿ ಭಟ್ಟ ಅವರು ಜಪಾನ್ ದೇಶದಲ್ಲಿ ಡಿಸೆಂಬರ್ನಲ್ಲಿ ನಡೆಯುವ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಅಮೆರಿಕವು ಜಪಾನಿನ ಹಿರೋಷಿಮಾ ನಗರದ ಮೇಲೆ ಜಲಜನಕ ಬಾಂಬ್ ದಾಳಿ ನಡೆಸಿದ ದುರಂತಕ್ಕೆ 60 ವರ್ಷಗಳು ತುಂಬಿದ ಸಂದರ್ಭದಲ್ಲಿ ಜಪಾನ್ ಸರ್ಕಾರವು ಬೃಹತ್ ಶಾಂತಿ ಸಮ್ಮೇಳನವನ್ನು ಡಿಸೆಂಬರ್ ತಿಂಗಳಲ್ಲಿ ಏರ್ಪಡಿಸಿದೆ. ಸಮ್ಮೇಳನದ ಅಂಗವಾಗಿ ಒಂದು ಸಾವಿರ ಕಿಮೀ ಉದ್ದದ ಶಾಂತಿ ಪಾದಯಾತ್ರೆ ಕಾರ್ಯಕ್ರಮ ನಡೆಯಲಿದೆ. ಪ್ರಪಂಚದ ವಿವಿಧ ದೇಶಗಳ ಗಣ್ಯರು, ಕಲಾವಿದರು ಶಾಂತಿ ಸಮ್ಮೇಳನದಲ್ಲಿ ಭಾಗವಹಿಸುವರು. ಈ ಸಮ್ಮೇಳನದಲ್ಲಿ ಕರ್ನಾಟಕದಿಂದ ರಘುಪತಿ ಭಟ್ಟರೂ ತೆರಳಲಿದ್ದಾರೆ.
ಈಗಾಗಲೇ ರಘುಪತಿ ಭಟ್ಟರು ಯುರೋಪಿನ ಪ್ರಮುಖ ದೇಶಗಳಲ್ಲಿ ಅನೇರ ಬಾರಿ ತಮ್ಮ ಗಂಜೀಫ ಕಲಾ ಪ್ರದರ್ಶನವನ್ನು ನಡೆಸಿ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Tuesday, November 28, 2000, 5:30 [IST]