ನೋವೋ ನಾರ್ಡಿಸ್ಕ್ ಅನಿಲ್ ಕಪೂರ್ಗೆ ಡೆನ್ಮಾರ್ಕ್ನ ಪ್ರತಿಷ್ಠಿತ ಡಿಪ್ಲೊಮಾ
ಬೆಂಗಳೂರು : ಮಧುಮೇಹದ ಬಗೆಗೆ ಜಾಗೃತಿ ಮೂಡಿಸಿದ್ದಕ್ಕೆ ಹಾಗೂ ಡೆನ್ಮಾರ್ಕ್ನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿಕೊಟ್ಟಿರುವುದಕ್ಕಾಗಿ ನೋವೋ ನಾರ್ಡಿಸ್ಕ್ ಫಾರ್ಮ ಇಂಡಿಯಾ ಲಿಮಿಟೆಡ್ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಅನಿಲ್ ಕಪೂರ್ ಅವರಿಗೆ ನ್ಯಾಷನಲ್ ಅಸೋಸಿಯೇಶನ್ ಫಾರ್ ಡ್ಯಾನಿಷ್ ಎಂಟರ್ಪ್ರೆೃಸ್ನ ಡಿಪ್ಲೊಮ ಹಾಗೂ ಪ್ರಿನ್ಸ್ ಹೆನ್ರಿಕ್ ಪದಕ ಲಭಿಸಿದೆ.
ಭಾರತದಲ್ಲಿನ ಡೆನ್ಮಾರ್ಕ್ ರಾಯಭಾರಿ ಬರ್ಗಿತ್ ಸ್ಟೋರ್ಗಾರ್ಡ್ ಮ್ಯಾಡ್ಸೆನ್ ಮಂಗಳವಾರ ನಡೆದ ಸರಳ ಸಮಾರಂಭವೊಂದರಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದರು. 10 ವರ್ಷದ ಹಿಂದೆ ನೋವೋ ನಾರ್ಡಿಸ್ಕ್ ಶುರುಮಾಡಿದಾಗ ಡೆನ್ಮಾರ್ಕ್ ಉತ್ಪನ್ನಗಳಿಗೆ ಈ ಮಟ್ಟದ ಬೇಡಿಕೆ ದೊರೆಯುವುದರ ಬಗ್ಗೆ ಕೊಂಚವೂ ನಿರೀಕ್ಷೆಯಿರಲಿಲ್ಲ. ಈ ಹೊತ್ತು ಒಂದು ಬಿಲಿಯನ್ ಸಂಪಾದನೆ ಕಂಪನಿಯದು. ಇಷ್ಟಕ್ಕೆಲ್ಲಾ ಕಾರಣ ಕಪೂರ್ ಶ್ರದ್ಧೆ.
ಭಾರತದಲ್ಲಿ ಸುಮಾರು 3 ಕೋಟಿ ಮಧುಮೇಹಿಗಳಿದ್ದಾರೆ. ಅವರಿಗೆ ಈ ಖಾಯಿಲೆ ಬಗ್ಗೆ ಅರಿವು ಹುಟ್ಟಿಸಿ, ಜಾಗೃತಿ ಮೂಡಿಸುವುದು ಅತ್ಯವಶ್ಯಕ. ಕಂಪನಿಯು ಬಡ ಮಧುಮೇಹಿಗಳ ಸಮಸ್ಯೆಗೆ ಸ್ಪಂದಿಸುತ್ತಿದ್ದು, ಉಚಿತ ಇನ್ಸುಲಿನ್ ವಿತರಿಸುತ್ತಿದೆ ಎಂದು ಪ್ರಶಸ್ತಿ ಪಡೆದ ನಂತರ ಕಪೂರ್ ಹೇಳಿದರು.
ಐಟಿ ಪಂಡಿತರಿಗೆ ಡೆನ್ಮಾರ್ಕ್ಗೂ ಬುಲಾವು : ಡೆನ್ಮಾರ್ಕ್ ದೇಶ ಭಾರತದ ಐಟಿ ಪರಿಣತರನ್ನು ಹುಡುಕುತ್ತಿದೆ. ಹಾಗಂತ ಈಗಲೇ ಅಮೆರಿಕ, ಬ್ರಿಟನ್ ಹಾಗೂ ಜರ್ಮನಿಗಳಂತೆ ಹಸುರು ಕಾರ್ಡ್ ವಿತರಿಸುತ್ತಿಲ್ಲ. ಅದರ ಬಗೆಗೆ ಚರ್ಚೆಗಳು ನಡೆಯುತ್ತಿವೆ ಎಂದು ಬರ್ಗಿತ್ ತಿಳಿಸಿದರು.
ಡೆನ್ಮಾರ್ಕ್ ಪುಟ್ಟ ದೇಶ. ಅದರ ಜನಸಂಖ್ಯೆ ಕೇವಲ 50 ಲಕ್ಷ. ಭಾರತೀಯರ ಸಮುದಾಯ, ಅವರಿಗೆ ಬೇಕಾದ ಊಟ ದೊರೆಯುವ ಹೊಟೇಲುಗಳು, ಪ್ರತ್ಯೇಕ ಮನರಂಜನೆಗಳು ಇಲ್ಲದಿರುವುದರಿಂದ ಅವರು ತಮ್ಮ ದೇಶಕ್ಕೆ ಭಾರತೀಯರನ್ನು ಆಕರ್ಷಿಸಲು ಸುಲಭವಾಗುತ್ತಿಲ್ಲ. ಆದರೆ ಕಳೆದೈದು ವರ್ಷಗಳಲ್ಲಿ 50 ಕಂಪನಿಗಳು ಹುಟ್ಟಿಕೊಂಡಿದ್ದು, ಹೆಸರನ್ನೂ ಮಾಡಿವೆ. ಭಾರತೀಯ ಐಟಿ ಪರಿಣತರೂ ಇಂಥ ಉತ್ತಮ ಅವಕಾಶವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಷ್ಟೆ ಎಂದರು.
(ಯುಎನ್ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications