ಕನ್ನಡ ಸಂಖ್ಯಾ ಫಲಕವೂ, ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯೂ
ಬೆಂಗಳೂರು : ಕನ್ನಡ ನಾಡಿನಲ್ಲಿ ಕನ್ನಡದ ಅಂಕಿಗಳು ಹಾಗೂ ಕನ್ನಡ ಸಂಪೂರ್ಣವಾಗಿ ಬಳಕೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಮುಂದೆ ರಾಜ್ಯ ಸರಕಾರದ ಎಲ್ಲ ಇಲಾಖೆಗಳ ವಾಹನಗಳ ಸಂಖ್ಯಾಫಲಕವೂ ಕನ್ನಡ ಅಂಕಿಗಳಿಂದ ಕಂಗೊಳಿಸಲಿದೆ.
ಇದು ಕನ್ನಡದ ಬೆಳವಣಿಗೆಯ ದೃಷ್ಟಿಯಿಂದ ಶುಭದಾಯಕ ವಿಚಾರವೇ ಸರಿ. ಆದರೆ, ಇದರ ಹಿಂದಿರುವ ಕೆಲವು ಸಮಸ್ಯೆಗಳ ಬಗ್ಗೆ ಹಾಗೂ ಸರಕಾರದ ಕೆಲವು ಇಲಾಖೆ ಮಾಡುತ್ತಿರುವ ಕಾನೂನು ಉಲ್ಲಂಘನೆಯ ಬಗ್ಗೆ ಗಮನ ಹರಿಸುವುದೂ ಅಗತ್ಯ. ಭಾನುವಾರದಿಂದ ಆರಂಭವಾಗಿರುವ ಕನ್ನಡ ಅಂಕಿ ಸಪ್ತಾಹದಲ್ಲಿ ಎಲ್ಲ ಸರಕಾರಿ ವಾಹನಗಳ ಸಂಖ್ಯಾ ಫಲಕಗಳನ್ನೂ ಕನ್ನಡ ಅಂಕಿಗಳಿಗೆ ಪರಿವರ್ತಿಸಲಾಗುತ್ತಿದೆ.
ಕಾನೂನು ಏನು ಹೇಳುತ್ತದೆ : ಭಾರತೀಯ ಮೋಟಾರು ವಾಹನ ಕಾಯಿದೆಯಡಿ ಸದ್ಯಕ್ಕಂತೂ ಇಂಡೋ ಅರೇಬಿಕ್ ಅಂಕಿಗಳ ಬದಲು ಮತ್ತಾವುದೇ ಭಾರತೀಯ ಭಾಷೆಯ ಸಂಖ್ಯೆಗಳನ್ನು ಮಾತ್ರ ಯಾವುದೇ ವಾಹನ ಹೊಂದಲು ಅವಕಾಶ ಕಲ್ಪಿಸಲಾಗಿಲ್ಲ. ಆದರೆ, ಮಾಲಿಕರು ಇಚ್ಛಿಸಿದಲ್ಲಿ ಹಾಲಿ ಸಂಖ್ಯಾ ಫಲಕದ ಜತೆ ಹೆಚ್ಚುವರಿಯಾಗಿ ಪ್ರಾದೇಶಿಕ ಭಾಷಾ ಸಂಖ್ಯಾ ಫಲಕ ಹೊಂದಲು ಅವಕಾಶ ಇದೆ. ಈ ರೀತಿಯ ರಾಷ್ಟ್ರೀಯ ಕಾನೂನಿಗೆ ಕಾರಣವೂ ಇದೆ. ಉದಾಹರಣೆಗೆ ಕನ್ನಡೇತರರಿಗೆ ಹಾಗೂ ಅಶಿಕ್ಷಿತ ಹಾಗೂ ಅರೆ ಶಿಕ್ಷಿತ ಕನ್ನಡಿಗರಿಗೇ ಕನ್ನಡ ಅಂಕಿಗಳ ಪರಿಚಯ ಇರುವುದಿಲ್ಲ. ಅಂತೆಯೇ ಇತರ ಭಾರತೀಯ ಭಾಷೆಗಳ ಸಂಖ್ಯೆಗಳ ಪರಿಚಯ ಇತ-ರ ಭಾಷೆಯ ನಾಗರಿಕರಿಗೆ ತಿಳಿದಿರುವುದಿಲ್ಲ.
ಒಂದೊಮ್ಮೆ ಭಾರತೀಯ ಭಾಷೆಯ ಸಂಖ್ಯಾ ಫಲಕ ಹೊತ್ತ ವಾಹನಗಳು ಅನ್ಯ ಭಾಷಿಕರಿಗೆ ಅಪಘಾತ ಮಾಡಿ ತಪ್ಪಿಸಿಕೊಂಡಲ್ಲಿ , ಹಾನಿಗೊಳಗಾದ ವ್ಯಕ್ತಿಗೆ ತನಗೆ ಯಾವ ವಾಹನದಿಂದ ಹಾನಿಯಾಯಿತು ಎಂದು ದಾಖಲಿಸಿಕೊಳ್ಳಲೂ ಕಷ್ಟವಾಗುತ್ತದೆ. ಈ ಬಗ್ಗೆ ಅಧಿ--ಕಾ-ರಿ-ಗ-ಳ-ನ್ನು ಪ್ರ-ಶ್ನಿ-ಸಿದಾ--ಗ ಈ ಸಂಬಂ-ಧ ಇಲ್ಲಿ-ಯ-ವ-ರೆ-ಗೆ ಯಾವ ದೂರೂ ತಮಗೆ ಬಂದಿ-ಲ್ಲಿ ಎಂದು ಜಾರಿ-ಕೆ ಉತ್ತ-ರ ನೀಡಿ-ದ-ರು.
ಪ್ರಾಧಿಕಾರದ ಸಲಹೆಯ ಮೇರೆಗೆ ಡಿ.ಪಿ.ಆರ್. ಹಾಲಿ ಸಂಖ್ಯಾ ಫಲಕದ ಜತೆ ವಾಹನದ ನಿರ್ದಿಷ್ಟ ಜಾಗದಲ್ಲಿ ಕನ್ನಡ ಫಲಕವನ್ನೂ ಹಾಕುವಂತೆ ಆದೇಶ ಹೊರಡಿಸಿತ್ತು. ಈಗ ಪ್ರಥಮ ಹಂತವಾಗಿ ಕರ್ನಾಟಕ ರಾಜ್ಯದ ಸರಕಾರಿ ವಾಹನಗಳಿಗೆ ಕನ್ನಡ ಸಂಖ್ಯಾ ಫಲಕಗಳನ್ನು ಮಾತ್ರವೇ ಅಳವಡಿಸಲಾಗುತ್ತಿದೆ. ಇದನ್ನೇ ಅನುಸರಿಸಿ ಕನ್ನಡಾಭಿಮಾನಿಗಳೆಲ್ಲರೂ ಕನ್ನಡದಲ್ಲೇ ಸಂಖ್ಯಾ ಫಲಕ ಬರೆಸಿದರೆ, ಆ ವಾಹನಗಳಿಂದ ಕನ್ನಡೇತರರಿಗೆ ತೊಂದರೆಯಾದರೆ, ಸಮಸ್ಯೆ ಆಗ ಉದ್ಭವಿಸುತ್ತದೆ. ಅಂತೆಯೇ ನೆರೆ ರಾಷ್ಟ್ರಗಳಿಗೆ ಹೋದ ಕನ್ನಡಿಗರಿಗೆ ತಮಿಳು, ತೆಲಗು, ಹಿಂದಿ, ಪಂಜಾಬಿ ಹೀಗೆ ಅನ್ಯ ಭಾಷೆಯ ಅಂಕಿಗಳುಳ್ಳ ವಾಹನದಿಂದ ತೊಂದರೆಯಾದರೆ, ಆಗ ಇದೇ ಸಮಸ್ಯೆಯನ್ನು ಕನ್ನಡಿಗರೂ ಅನುಭವಿಸಬೇಕಾಗುತ್ತದೆ.
ಇದನ್ನು ಅರಿತು ಸರಕಾರ ಇಂಗ್ಲಿಷ್ ಸಂಖ್ಯಾ ಫಲಕಗಳ ಜತೆ ಕನ್ನಡ ಫಲಕ ಹಾಕ ಬೇಕೇ ಹೊರತು, ಇಂಗ್ಲಿಷ್ ಬೋರ್ಡ್ ಬದಲು ಕನ್ನಡ ಫಲಕ ಹಾಕುವುದು ಸೂಕ್ತವಲ್ಲ. ಕನ್ನಡಾಭಿಮಾನ ಎಲ್ಲರಲ್ಲೂ ಇರಬೇಕು. ಕನ್ನಡಾಭಿಮಾನದ ಹೆಸರಿನಲ್ಲಿ ಕೇಂದ್ರದ ಕಾನೂನು ಉಲ್ಲಂಘಿಸುವುದು ಸಾಧುವೇ ಎನ್ನುವುದು ಈಗ ಉದ್ಭವಿಸಿರುವ ಪ್ರಶ್ನೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications