ಪ್ಯಾರಿಸ್ನಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕಸಂಗೀತದ ಜುಗಲ್ ಬಂದಿ
ರಣವೀರ್ ನಾಯರ್
ಪ್ಯಾರೀಸ್ : ಹಿಂದೂಸ್ತಾನೀ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಜುಗಲ್ಬಂದಿ ಕಚೇರಿ ಪ್ರಥಮ ಬಾರಿಗೆ ಈ ಭಾನುವಾರದಂದು ಪ್ಯಾರಿಸ್ನ ಸಂಜೆಗೆ ರಂಗು ಬಳಿಯಲಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಕಲ್ಪನಾ ವೆಂಕಟ್ ಅವರ ವಯಲಿನ್ ಮತ್ತು ಹಿಂದುಸ್ತಾನೀ ಸಂಗೀತದ ಬಿ. ಶಿವರಾಮ ಕೃಷ್ಣ ರಾವ್ ಅವರ ಸಿತಾರ್ ವಾದನ , ವೇದಿಕೆಯಲ್ಲೊಂದು ಕೌಶಲ್ಯ ಸ್ಪರ್ಧೆಯನ್ನೇ ನಿರ್ಮಿಸಲಿದೆ. ಭಾರತದ ಸಾಂಸ್ಕೃತಿಕ ಹೆಚ್ಚುಗಾರಿಕೆಯನ್ನು ಫ್ರಾನ್ಸ್ನಲ್ಲಿ ಪರಿಚಯಿಸುವ ಉದ್ದೇಶದೊಂದಿಗೆ ಹುಟ್ಟಿಕೊಂಡಿರುವ ತ್ರಿವೇಣಿ ಸಂಘಟನೆ ಕಾರ್ಯಕ್ರಮವನ್ನು ಆಯೋಜಿಸಿದೆ. ಫ್ರಾನ್ಸ್ಗೆ ಜುಗಲ್ ಬಂದಿ ಹೊಸದೇನಲ್ಲ . ಆದರೆ ಹಿಂದೂಸ್ತಾನೀ ಮತ್ತು ಕರ್ನಾಟಕ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ ಪ್ರಥಮ ಬಾರಿಗೆ ನಡೆಯುತ್ತಿದೆ ಎನ್ನುತ್ತಾರೆ ಆಯೋಜಕರು.
ಕಲ್ಪನಾ, ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಿಣತೆ. ತನ್ನ ಆರನೇ ವಯಸ್ಸಿನಲ್ಲಿ ತಾಯಿ ಸೀತಾ ಕಿಶೋರ್ ಅವರ ಮಾರ್ಗದರ್ಶನದಲ್ಲಿ ಸಂಗೀತ ಕಲಿಕೆ ಆರಂಭಿಸಿದ ಈಕೆ, ನಂತರದಲ್ಲಿ ಸಂಗೀತ ಚೂಡಾ ಮಣಿ ಟಿ. ರುಕ್ಮಿಣಿ ಕಲ್ಪನಾರ ಶಿಷ್ಯೆಯಾಗಿ ಸಂಗೀತಾಭ್ಯಾಸ ಮುಂದುವರೆಸಿದರು. ಕಲ್ಪನಾ ಈವರೆಗೆ ಭಾರತದಾದ್ಯಂತ, ಪಶ್ಚಿಮ ಏಷ್ಯ , ಯುಎಸ್ಎ ಮತ್ತು ಸಿಂಗಾಪುರಗಳಲ್ಲಿ ಸುಮಾರು 1,500ಕ್ಕೂ ಹೆಚ್ಚು ಕಚೇರಿಗಳನ್ನು ಕೊಟ್ಟಿದ್ದಾರೆ.
ಕಚೇರಿಯಲ್ಲಿ ಹಿಂದುಸ್ತಾನಿ ಸಂಗೀತ ಪೀಠದಲ್ಲಿ ಕುಳಿತು ಕೊಳ್ಲಲಿರುವ ಬಸವರಾಜ ಶಿವರಾಮ್ ಕೃಷ್ಣ ರಾವ್ 1976ರಲ್ಲಿ ಸಂಗೀತ ಕುಟುಂಬದಲ್ಲಿಯೇ ಹುಟ್ಟಿದವರು. ತಂದೆ ಪಂಡಿತ್ ಸುಬ್ಬರಾವ್ ಅವರಿಂದ ಸಂಗೀತ ಪಾಠಕ್ಕೆ ಗಣಾಧಿಪತಯೇ ನಮಃ ಬರೆದರು. ನಂತರ ಮಿಯಾನ್ ಅಚ್ಪಾಲ್ ಘರಾನಾದ ಹಿರಿಯರಾದ, ಅಹ್ಮದ್ ಹುಸೈನ್ ಅವರ ಶಿಷ್ಯತ್ವ. ಶಿವರಾಮ ಅವರ ಲಯಜ್ಞಾನದ ಕೀರ್ತಿಗೆ, ತಿರುಪತಿಯಲ್ಲಿರುವ ದಕ್ಷಿಣ ಭಾರತೀಯ ರಾಜ್ಯಗಳ ಸಂಗೀತ ಸಂಸ್ಥೆ ‘ಲಯ ಬ್ರಹ್ಮ ’ ಬಿರುದಿನ ಮುಕುಟವಿಟ್ಟಿದೆ.
ಪ್ಯಾರಿಸ್ನ ಸಂಗೀತ ಕಚೇರಿಯಲ್ಲಿ ಮೃದಂಗ ಸಾಥಿಯಾದರೆ ಡಿ.ಎ. ಶ್ರೀನಿವಾಸ್ ಮತ್ತು ಬಿ. ಗಣೇಶ್ ರಾವ್ ತಬಲಾ ಸಾಥಿಯಾಗಲಿದ್ದಾರೆ. ಅಂದು ಸಂಜೆ ಪ್ಯಾರಿಸ್ನ ಸಂಗೀತ ಪ್ರೇಮಿಗಳು ಸಾಲೆ ಅಡ್ಯಾರ್ನಲ್ಲಿ ಸಂಜೆ 6.30ಕ್ಕೆ ಸೇರಲಿದ್ದಾರೆ. ಜುಗಲ್ ಬಂದಿಯ ಸವಿ ಸಂಜೆ ಅವರನ್ನು ಎದುರುಗೊಳ್ಳಲಿದೆ.
(ಐಎಎನ್ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications