ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೀರಪ್ಪನ್ ಸೆರೆ : ಇಂದು ಕರ್ನಾಟಕ ನಿಯೋಗ- ಫರ್ನಾಂಡಿಸ್ ಮುಖಾಮುಖಿ
ನವದೆಹಲಿ : ಕಾಡುಗಳ್ಳ, ನರಹಂತಕ ವೀರಪ್ಪನ್ನನ್ನು ಸೆರೆ ಹಿಡಿಯಲು ಕೇಂದ್ರ ಸರ್ಕಾರದ ನೆರವನ್ನು ಯಾಚಿಸಲು ಕೇಂದ್ರ ರಕ್ಷಣಾ ಖಾತೆ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಕರ್ನಾಟಕದ ಹಿರಿಯ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ಮಾಡುವುದು.
ಮುಖ್ಯ ಕಾರ್ಯದರ್ಶಿ ಬಿ.ಕೆ.ಭಟ್ಟಾಚಾರ್ಯ, ಡಿಜಿಪಿ ಸಿ.ದಿನಕರ್ ಅವರನ್ನೊಳಗೊಂಡ ತಂಡ ಜಾರ್ಜ್ ಅವರನ್ನು ಭೇಟಿ ಮಾಡಿ ನೆರವು ಕೋರಲಿದೆ. ಇದೇ ಸಂಬಂಧ ನವೆಂಬರ್ 27, ಸೋಮವಾರ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಎ.ಬಿ.ವಾಜಪೇಯಿ ಅವರನ್ನು ಭೇಟಿ ಮಾಡುವರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ
Comments
Story first published: Friday, November 24, 2000, 5:30 [IST]