ಎಲ್ಲಾ ದುರಂತಗಳಿಗೆ ರಾಜ್ ಅವರೇ ಹೊಣೆ- ಎಂ. ಚಿದಾನಂದ ಮೂರ್ತಿ
ಬೆಂಗಳೂರು : ನಾಡಿನ ಪ್ರಮುಖರೆಲ್ಲಾ ರಾಜ್ ಬಿಡುಗಡೆಯ ಬಗ್ಗೆ ಸಂಭ್ರಮಿಸುತ್ತಾ , ಅವರ ಸಜ್ಜನಿಕೆಯನ್ನು ಹೊಗಳುತ್ತಿರುವಾಗ ಕನ್ನಡ ಶಕ್ತಿ ಕೇಂದ್ರ ವರನಟನ ಅರಣ್ಯಪರ್ವದ ನಡವಳಿಕೆಗಳ ಬಗ್ಗೆ ಅಪಸ್ವರವೆತ್ತಿದೆ.
ಒತ್ತೆಯಾಳಾಗಿದ್ದಾಗ ವೀರಪ್ಪನ್ಗೆ ಅನುಕೂಲವಾಗುವಂತಹ ಸಂದೇಶಗಳನ್ನು ಕಳುಹಿಸುವ ಮೂಲಕ ಅವರು ತಮಿಳರ ದೃಷ್ಟಿಯಲ್ಲಿ ವೀರಪ್ಪನನ್ನು ನಾಯಕನನ್ನಾಗಿಸಿದರು. ಇದನ್ನು ಅವರ ಮೇಲೆ ಅಭಿಮಾನವಿಟ್ಟ ಕನ್ನಡದ ಜನತೆ ಸಹಿಸಿಕೊಳ್ಳುವುದು ಕಷ್ಟ ಎಂದು ಶಕ್ತಿ ಕೇಂದ್ರ ಆಪಾದಿಸಿದೆ.
ಕೇಂದ್ರದ ಪರವಾಗಿ ಶಕ್ತಿಕೇಂದ್ರದ ಅಧ್ಯಕ್ಷ ಎಂ. ಚಿದಾನಂದಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ವೀರಪ್ಪನ್ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಹಾಗೂ ಅವನ ವಿರುದ್ಧ ಕಾರ್ಯಾಚರಣೆ ನಡೆಸದಂತೆ ಕಾಡಿನಿಂದ ಸಂದೇಶ ಕಳಿಸಿದ ರಾಜ್ ನಡವಳಿಕೆಯನ್ನು ಅವರು ಟೀಕಿಸಿದರು. ಕರ್ನಾಟಕದ ಹಿತ ನನಗೆ ಮುಖ್ಯ ಎಂದು ರಾಜ್ ಹೇಳಿಕೆ ನೀಡಿದ್ದಲ್ಲಿ ಅವರು ಅಭಿಮಾನಿಗಳ ದೃಷ್ಟಿಯಲ್ಲಿ ದೊಡ್ಡವರಾಗುತ್ತಿದ್ದರು ಎಂದರು.
ರಾಜ್ ಅಪಹರಣ ಪ್ರಕರಣದಿಂದಾಗಿ ರಾಜ್ಯಕ್ಕೆ ಅಪಾರ ನಷ್ಟ ಹಾಗೂ ಮುಖಭಂಗ ಉಂಟಾಗಿದೆ. ರಾಜ್ಯ ಸರ್ಕಾರವಂತೂ ತಮಿಳುನಾಡಿಗೆ ಬೇಷರತ್ತಾಗಿ ಶರಣಾಗಿದೆ. ಕೆಜಿಎಫ್ನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿದೆ. ರಾಜ್ಯದಲ್ಲಿನ ತಮಿಳರ ಆತ್ಮವಿಶ್ವಾಸ ಹೆಚ್ಚಿದೆ ಮುಂತಾಗಿ ಅವರು ಟೀಕಿಸಿದರು.
ಸರ್ಕಾರದ ಎಚ್ಚರಿಕೆಯನ್ನು ಮೀರಿ ಗಾಜನೂರಿಗೆ ಹೋದ ರಾಜ್, ಗಂಡಾಂತರವನ್ನು ತಾವಾಗಿಯೇ ತಂದುಕೊಂಡರು. ಆನಂತರದ ಎಲ್ಲಾ ದುರಂತಗಳಿಗೆ ಅವರೇ ಹೊಣೆ ಎಂದು ದೂರಿದ ಅವರು, ಪ್ರಕರಣದ ಬಗ್ಗೆ ಅನೇಕ ಗೊಂದಲಗಳಿದ್ದು ಅವುಗಳ ಬಗ್ಗೆ ರಾಜ್ ಸ್ಪಷ್ಟನೆ ನೀಡಬೇಕು, ಜನತೆಗೆ ಸತ್ಯಾಂಶ ತಿಳಿಸಬೇಕು, ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಹಣ ವಸೂಲಿ, ಗಲಭೆಗಳನ್ನು ರಾಜ್ ಬಹಿರಂಗವಾಗಿ ಖಂಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಕುಮಾರ್ ಬಗ್ಗೆ ನಮಗೆ ಗೌರವವಿದೆ. ಪ್ರಸ್ತುತದ ಅಳಲು ಕನ್ನಡದ ಹಿತಾಸಕ್ತಿಗೆ ಸಂಬಂಧಿಸಿದುದು ಎಂದು ಸ್ಪಷ್ಟಪಡಿಸಿದ ಚಿದಾನಂದ ಮೂರ್ತಿ, ಪ್ರಕರಣ ಸದ್ಯಕ್ಕೆ ಬಗೆಹರಿದಿದ್ದರೂ ಮುಂದೆ ಏನೆಲ್ಲಾ ದುರಂತಗಳಿಗೆ ಕುಡಿಯಾಗುತ್ತದೆಯೋ ಎನ್ನುವ ಶಂಕೆ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications