ಮನರಂಜನಾ ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ಪರಿಷತ್ತಿನ ಅನುಮೋದನೆ
ಬೆಂಗಳೂರು : ಮುಂದಿನ ಸಾಲಿನಿಂದ ಕನ್ನಡ ಚಿತ್ರಗಳಿಗೂ ತೆರಿಗೆ ವಿನಾಯಿತಿ ಬೇಡ ಎಂಬ ಒತ್ತಾಯ, ಕನ್ನಡ ಚಿತ್ರಗಳ ಸಾಹಿತ್ಯ, ಗುಣಮಟ್ಟ, ಚಿತ್ರೋದ್ಯಮದ ವಾಸ್ತವ ಸ್ಥಿತಿ-ಗತಿಗಳ ಚರ್ಚೆ, ರಾಜ್ಯ ಸರಕಾರವು ಚಿತ್ರಮಂದಿರ ಮಾಲಿಕರ ಜತೆ ಶಾಮೀಲಾಗಿದೆ ಎಂಬ ಆರೋಪ, ಪ್ರತಿಪಕ್ಷಗಳ ವಾಗ್ವಾದ ಈ ಎಲ್ಲದರ ನಡುವೆ ಕನ್ನಡೇತರ ಚಿತ್ರಗಳಿಗೆ ಮನರಂಜನಾ ತೆರಿಗೆಯಲ್ಲಿ ರಿಯಾಯಿತಿ ನೀಡುವ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ತು ಗುರುವಾರ ಅನುಮೋದನೆ ನೀಡಿದೆ. ಧ್ವನಿಮತದ ಮೂಲಕ ವಿಧೇಯಕ ಅನುಮೋದನೆ ಪಡೆಯಿತು.
ಈ ವಿಧೇಯಕದ ಮೇಲೆ ನಡೆದ ಚರ್ಚೆಗೆ ರಾಜ್ಯ ಹಣಕಾಸು ಸಚಿವ ಎಂ. ಶಿವಣ್ಣ ಉತ್ತರಿಸಿದರು. ಈ ವಿಧೇಯಕದಡಿಯಲ್ಲಿ ಕನ್ನಡೇತರ ಚಿತ್ರಗಳಗೆ ನೀಡಲಾಗುತ್ತಿರುವ ಶೇಕಡಾ 20ರಷ್ಟು ಮನರಂಜನಾತೆರಿಗೆ ವಿನಾಯಿತಿಯಿಂದ ಈ ಸಾಲಿನಲ್ಲಿ ಐದು ಕೋಟಿ ನಲವತ್ತೆೈದು ಲಕ್ಷ ರುಪಾಯಿ ನಷ್ಟ ರಾಜ್ಯ ಬೊಕ್ಕಸಕ್ಕೆ ಉಂಟಾಗಲಿದೆ ಎಂದು ಅವರು ವಿವರಿಸಿದರು. ಈ ವಿಧೇಯಕವು ಕನ್ನಡೇತರ ಚಿತ್ರಗಳಿಗೆ ಶೇ. 80 ರಷ್ಟು ತೆರಿಗೆ ವಿನಾಯಿತಿ ನೀಡಲು ಅವಕಾಶ ಕಲ್ಪಿಸುತ್ತದೆ. ಈ ಮುನ್ನ ಕನ್ನಡೇತರ ಚಿತ್ರಗಳಿಗೆ ಶೇ. 100ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.
ಚಿತ್ರೋದ್ಯಮ ಬಂದ್ನಿಂದ ಉಂಟಾದ ನಷ್ಟ : ರಾಜ್ ಅಪಹರಣದ ಕಾಲದಲ್ಲಿ ಕನ್ನಡ ಚಿತ್ರೋದ್ಯಮ ನಡೆಸಿದ ಸ್ವಯಂ ಘೋಷಿತ ಬಂದ್ನಿಂದಾಗಿ ಮೂರುವರೆ ಕೋಟಿ ರುಪಾಯಿ ಮನರಂಜನಾ ತೆರಿಗೆ ನಷ್ಟ ಉಂಟಾಯಿತು ಎಂದು ಅವರು ಹೇಳಿದರು. ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಸಚಿವರು ಈ ವಿಧೇಯಕ ಜಾರಿಗೆ ತರುತ್ತಿರುವುದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದರು.
ವಿಧೇಯಕ ಅನುಮೋದನೆ ಪಡೆವ ಮುನ್ನ ನಡೆದ ಚರ್ಚೆಯಲ್ಲಿ ಚಿತ್ರ ಮಂದಿರಗಳ ಮಾಲಿಕರ ಜತೆ ಸರಕಾರ ಶಾಮೀಲಾಗಿದೆ ಎಂಬ ಶಂಕೆಯೂ ವ್ಯಕ್ತವಾಯಿತು.
ಕನ್ನಡ ಚಿತ್ರಗಳಿಗೂ ವಿನಾಯಿತಿ ಬೇಡ : ಈ ಮಧ್ಯೆ ಮುಂದಿನ ಹಣಕಾಸು ವರ್ಷದಿಂದ ಕನ್ನಡ ಚಿತ್ರಗಳಿಗೂ ನೀಡುತ್ತಿರುವ ಶೇಕಡಾ ನೂರರಷ್ಟು ಮನರಂಜನಾ ತೆರಿಗೆ ವಿನಾಯಿತಿಯನ್ನು ಸರಕಾರ ನಿಲ್ಲಿಸಬೇಕು ಎಂದು ಮಾಜಿ ಸಚಿವ ಹಾಗೂ ಹಿರಿಯ ಸದಸ್ಯ ಎಂ.ಸಿ. ನಾಣಯ್ಯ ವಿಧಾನ ಪರಿಷತ್ತಿನಲ್ಲಿ ಆಗ್ರಹಿಸಿದರು.
ಇನ್ನೂ ಎಷ್ಟು ವರ್ಷಗಳ ಕಾಲ ತೆರಿಗೆ ವಿನಾಯಿತಿ ನೀಡಬೇಕು. ಸರಕಾರ ತೆರಿಗೆ ವಿನಾಯಿತಿ ನೀಡಿರುವುದರಿಂದ ಉತ್ತಮ ಕನ್ನಡ ಚಿತ್ರಗಳೇನಾದರೂ ಬರುತ್ತಿದೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ನಾಣಯ್ಯ ಕೇಳಿದರು. ಇಷ್ಟು ವರ್ಷಗಳ ಕಾಲ ಕನ್ನಡವೂ ಸೇರಿದಂತೆ ಎಲ್ಲ ಚಿತ್ರಗಳಿಗೂ ನೀಡಿರುವ ತೆರಿಗೆ ವಿನಾಯಿತಿ ನಿಲ್ಲಿಸಿ, ಮುಂದಿನ ಆಯವ್ಯಯದಲ್ಲಿ ತೆರಿಗೆ ವಿನಾಯಿತಿ ಕೈಬಿಡಿ ಎಂದು ಒತ್ತಾಯಿಸಿ, ಸರಕಾರ ಈ ಕುರಿತು ಗಂಭೀರವಾಗಿ ಚಿಂತನೆ ಮಾಡಬೇಕೆಂದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications