ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪುಟ್ಟಪರ್ತಿಯಿಂದ ಬೆಂಗಳೂರಿಗೆ ನೇರ ರೈಲು ಓಡಾಟ ಪ್ರಾರಂಭ
ಪುಟ್ಟಪರ್ತಿ : ಸಾಯಿಬಾಬಾ ಅವರ 75 ನೇ ಜಯಂತಿ ಅಂಗವಾಗಿ ಬೆಂಗಳೂರು ಮತ್ತು ಪುಟ್ಟಪರ್ತಿ ನಡುವೆ ನೇರ ರೈಲು ಸೌಕರ್ಯ ಬುಧವಾರದಿಂದ ಆರಂಭವಾಗುವುದರೊಂದಿಗೆ, ಪುಟ್ಟಪರ್ತಿಗೆ ನೇರ ರೈಲು ಓಡಿಸುವಂತೆ ಒತ್ತಾಯಿಸುತ್ತಿದ್ದ ಕರ್ನಾಟಕದ ಬಾಬಾ ಭಕ್ತರ ಬಹುದಿನದ ಬೇಡಿಕೆ ಈಡೇರಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸತ್ಯಸಾಯಿ ಪ್ರಶಾಂತಿ ನಿಲಯಂ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಹೊಸ ರೈಲು ಮಾರ್ಗಕ್ಕೆ ನಿಶಾನೆ ತೋರಿದರು. ಹೊಸ ರೈಲು ಮಾರ್ಗದಿಂದ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಪ್ರಯಾಣಿಸುವವರಿಗೆ 50 ಕಿಮೀ ದೂರ ಕಡಿಮೆಯಾಗುತ್ತದೆ ಎಂದರು. ಈ ಮಾರ್ಗವು 54 ಕೋಟಿ ರುಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ.
ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯ ಬಿ.ಕೆ. ಪಾರ್ಥಸಾರಥಿ, ಪಶು ಸಂಗೋಪನೆ ಖಾತೆಯ ಸಚಿವ ಎನ್. ಕೃಷ್ಣಪ್ಪ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
Comments
Story first published: Thursday, November 23, 2000, 5:30 [IST]