ಮಿಥುನ್ ಚಕ್ರವರ್ತಿಗೆ ವೀರಪ್ಪನ್ನಿಂದ ಅಪಹರಣ ಬೆದರಿಕೆ
ಕಲ್ಕತ್ತ : ರಾಜ್ ಅಪಹರಣ ನಾಟಕ ಮುಗಿದು ಒಂದು ವಾರ ಕಳೆದಿದೆಯಷ್ಟೆ. ಈಗ ವೀರಪ್ಪನ್ ಮತ್ತೆ ಬಾಲ ಬಿಚ್ಚಿದ್ದಾನೆ, ಅದೂ ಅವನ ವಿರುದ್ಧ ವಿಶೇಷ ಕಾಯೂಚರಣೆ ನಡೆದಿರುವ ಸಂದರ್ಭದಲ್ಲೇ. ಈ ಬಾರಿ ಅವನ ಗುರಿ ಹಿಂದಿ ಚಿತ್ರ ನಟ ಮಿಥುನ್ ಚಕ್ರವರ್ತಿ!
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಮಿಥುನ್ ಚಕ್ರವರ್ತಿಯವರನ್ನು ಅಪಹರಿಸುವುದಾಗಿ ವೀರಪ್ಪನ್ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಕಾರಣ ಅವರಿಗೆ ಬಿಗಿ ರಕ್ಷಣೆ ಒದಗಿಸಲಾಗುವುದು. ಇದಕ್ಕೆ ಮಿಥುನ್ ಒಪ್ಪಬೇಕಷ್ಟೆ ಎಂದರು.
ತಮಿಳುನಾಡಿನ ಗಿರಿ ಪ್ರದೇಶ ಊಟಿಯಲ್ಲಿ ಈತನ ರೆಸಾರ್ಟ್ ಇರುವುದರಿಂದ ವೀರಪ್ಪನ್ ಈತನಿಗೆ ಅಪಹರಣದ ಬೆದರಿಕೆ ಹಾಕಿದ್ದಾನೆ. ಇದನ್ನು ಖುದ್ದು ಮಿಥುನ್ ತಿಳಿಸಿದ್ದಾರೆ ಎಂದು ಭಟ್ಟಾಚಾರ್ಯ ಹೇಳಿದರು.
ಡಿಸ್ಕೋ ಡಾನ್ಸರ್ ಚಿತ್ರದಿಂದ ಹಿಂದಿ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿ, ಡಿಸ್ಕೋ ಕ್ರೇಜ್ ಹುಟ್ಟು ಹಾಕಿದ ಮಿಥುನ್ ಹುಟ್ಟು ಶ್ರೀಮಂತ. 80ರ ದಶಕದಲ್ಲಿ ಈತಿನ ಕೆಲವು ಚಿತ್ರಗಳು ಸೂಪರ್ ಹಿಟ್ ಆಗಿವೆ.
(ಇನ್ಫೋ ವಾರ್ತೆ)