ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಒಣಗಿದ ಇಳಿಗೆ ತಂಪೆರೆದ ಮಳೆ
ಬೆಂಗಳೂರು : ಕರಾವಳಿಯಲ್ಲಿ ಒಣಹವೆಯಿಂದ ಒಣಗಿದ್ದ ನೆಲಕ್ಕೆ ಸೋಮವಾರ ಮಳೆರಾಯ ತಂಪೆರೆದಿದ್ದಾನೆ. ಬೆಳ್ತಂಗಡಿಯಲ್ಲಿ ಹಾಗೂ ಉಪ್ಪಿನಂಗಡಿಯಲ್ಲಿ ತಲಾ 4 ಸೆಂಟಿ ಮೀಟರ್ ಮಳೆಯಾಗಿದೆ. ಕರಾವಳಿಯ ಇನ್ನಿತರ ಕೆಲವೆಡೆಗಳಲ್ಲೂ ಹಗುರದಿಂದ ಮಳೆ ಬಿದ್ದಿದೆ.
ಉಳಿದಂತೆ ಒಳನಾಡುಗಳಲ್ಲಿ ಒಣಹವೆಯೇ ಇತ್ತು. ರಾಜ್ಯದ್ಯಂತ ತಾಪಮಾನ ಸಾಮಾನ್ಯಕ್ಕಿಂತಲೂ ಸ್ವಲ್ಪ ಹೆಚ್ಚಾಗಿತ್ತು. ರಾಜ್ಯದ ಅತಿ ಕಡಿಮೆ ಉಷ್ಣಾಂಶ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 13.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹವಾಮಾನ ವೀಕ್ಷಣಾಲಯ ನೀಡಿರುವ ಮುನ್ಸೂಚನೆಯಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆ ಹಗುರದಿಂದ ಮಳೆ ಬೀಳುವ ಸಂಭವ ಇದೆ.
ಮುಂದಿನ 24 ಗಂಟೆಗಳ ಅವಧಿಯ ಸ್ಥಳೀಯ ಹವಾಮಾನ ಮುನ್ಸೂಚನೆಯ ರೀತ್ಯ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ. ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ಸಂಭವ ಇದೆ.
Comments
Story first published: Tuesday, November 21, 2000, 5:30 [IST]