ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಬ್ಬಲಗೆರೆಯಲ್ಲಿ 2.5 ಲಕ್ಷ ರು. ಅಡಿಕೆ ದರೋಡೆ
ಶಿವಮೊಗ್ಗ : ಲಾರಿ ರಿಪೇರಿಗೆ ಸ್ಕೂೃ ಡ್ರೆೃವರ್ ಕೇಳುವ ನೆಪದಲ್ಲಿ ದುಷ್ಕರ್ಮಿಗಳ ತಂಡವೊಂದು ತೋಟದ ಮನೆಯಾಂದಕ್ಕೆ ನುಗ್ಗಿ 2.50 ಲಕ್ಷ ರುಪಾಯಿ ಮೌಲ್ಯದ ಅಡಿಕೆಯನ್ನು ಕದ್ದೊಯ್ದ ಘಟನೆ ಅಬ್ಬಲಗೆರೆ ಗ್ರಾಮದಲ್ಲಿ ನಡೆದಿದೆ.
ತಂಡದಲ್ಲಿ ಸುಮಾರು 8-10 ಜನರಿದ್ದು ಹಿಂದಿ ಹಾಗೂ ಉರ್ದು ಮಾತನಾಡುತ್ತಿದ್ದರೆನ್ನಲಾಗಿದೆ. ಶನಿವಾರ ರಾತ್ರಿ ಸುಮಾರು 2 ಗಂಟೆಯ ವೇಳೆಯಲ್ಲಿ ಲಾರಿ ರಿಪೇರಿ ಮಾಡಲು ಸ್ಕೂೃ ಡ್ರೆೃವರ್ ಯಾಚಿಸಿ ತೋಟದ ಮನೆಗೆ ನುಗ್ಗಿದ ಖದೀಮರು ಕಾವಲುಗಾರರಾದ ರಾಜಶೇಖರಯ್ಯ, ರಾಜಯ್ಯ ಹಾಗೂ ಅಡಿಕೆ ಬೇಯಿಸುವ ಕೆಲಸಗಾರ ನಜೀರ್ ಸೇರಿದಂತೆ 6 ಮಂದಿಯ ಕೈಕಾಲುಗಳನ್ನು ಕಟ್ಟಿಹಾಕಿ, 34 ಚೀಲ ಅಡಿಕೆಯನ್ನು ಮಿನಿ ಲಾರಿಯಲ್ಲಿ ಸಾಗಿಸಿ ಪರಾರಿಯಾಗಿದ್ದಾರೆ.
ಈ ಕೃತ್ಯ ಎಸಗಿದ ತಂಡದ ಸದಸ್ಯರ ವಯಸ್ಸು 25-30 ಎನ್ನಲಾಗಿದೆ. ತೋಟದ ಮನೆ ಮುಖ್ಯರಸ್ತೆಯ ಸಮೀಪವೇ ಇದ್ದುದರಿಂದ ದರೋಡೆ ಕೋರರು ಕ್ಷಿಪ್ರವಾಗಿ ಪೇರಿ ಕೀಳಲು ಸಾಧ್ಯವಾಗಿದೆ.
(ಇನ್ಫೋ ವಾರ್ತೆ)
Comments
Story first published: Monday, November 20, 2000, 5:30 [IST]