ನಿತ್ಯ ಭವಿಷ್ಯ
ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವಾತಾವರಣ ಹೇಗೋ, ಹಾಗೆ ನಿಮ್ಮ ಮನ. ಹೊರಗೆ ಕೊರೆಯುವ ಚಳಿ, ಹಿಮಪಾತ . ರಗ್ಗು ಹೊದ್ದು ಮುದುರಿ ಕುಳಿತಂತೆ ಬದುಕು - ಭಾವ. ಮನೆಯಲ್ಲೇ ಸೃಜನಶೀಲ ಚಟುವಟಿಕೆಯತ್ತ ಗಮನ ಹರಿಸಿ. ಚಳಿಗಾಲದಲ್ಲಿ ಕಲೆಗಳು ಅರಳುತ್ತವಂತೆ !
ವೃಷಭ : ಗೆಳತಿಯ ನಿರೀಕ್ಷೆಯಲ್ಲಿ ವೃಥಾ ಸಮಯ ಹಾಳು. ಬಂದಾಳೋ ಬಾರಳೋ ? ತಳಮಳ. ಆಧುನಿಕ ಸಂಪರ್ಕ ಸಾಧನಗಳ ಪ್ರಯೋಜನ ಪಡೆಯುವುದು ಒಳಿತು.
ಮಿಥುನ : ಎಷ್ಟು ಕಲಿತರೂ , ಎಷ್ಟು ಸಂಪಾದಿಸಿದರೂ, ಇವೆಲ್ಲ ಯಾವ ಪುರುಷಾರ್ಥಕ್ಕೆ ಅನ್ನಿಸುವುದು. ಸಹಜ. ಇದೂ ಕ್ಷಣಿಕ ವೈರಾಗ್ಯದ ಇನ್ನೊಂದು ಅಂಕ. ನಾಳೆ ಇಂಥ ಆಲೋಚನೆ ನಿಮಗೆ ಬರದು, ನಿಸ್ಸಂದೇಹ.
ಕಟಕ : ಪಿತ್ತ ಪ್ರಕೋಪ , ಉದರ ಬಾಧೆ, ತಲೆ ಶೂಲೆ ! ಪ್ಲೀಸ್ ರಿಮೆಂಬರ್, ಯು ಆರ್ ವಾಟ್ ಯು ಈಟ್. ಟೇಕ್ ಕೇರ್.
ಸಿಂಹ : ಲಾಟರಿ, ಲೋಟೋ ಮುಂತಾದ ದಿಢೀರ್ ಡಾಲರ್ಪತಿ ಸ್ಪೆಕ್ಯುಲೇಶನ್ಗಳಲ್ಲಿ ನಿಮಗೆ ನಂಬುಗೆ ಇಲ್ಲದಿರಬಹುದು. ಆದರೆ, ಎಲ್ಲೋ ಹುದುಗಿದ ಹಣ ನಿಮ್ಮ ಕಡೆ ಹರಿದು ಬರುತ್ತಿದೆ. ಲಕ್ಷ್ಮಿಯನ್ನು ಆದರದಿಂದ ಬರಮಾಡಿಕೊಳ್ಳಿ.
ಕನ್ಯಾ : ಇವತ್ತು ಹೀಗೆ, ನಾಳೆ ಹೇಗೋ ! ಮಾನಸಿಕ ತುಮುಲದಲ್ಲಿ ತೊಳಲಾಡುತ್ತಿದ್ದೀರಿ. ನಿಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳೇನು ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಆನಂತರ ಕಾರ್ಯೋನ್ಮುಖರಾಗಿರಿ.
ತುಲಾ : ನೀವು ನೌಕರಿ ಮಾಡುವ ಕಚೇರಿಯಲ್ಲಿ ನೀವೇ ಇವತ್ತು ಕೇಂದ್ರ ಬಿಂದು. ಆಫೀಸಿನಲ್ಲಿ ಸರ್ಪ್ರೆೃಸಸ್ಗಳ ಸುರಿಮಳೆ. ಪ್ರೊಮೋಷನ್ ಬಂದರೂ ಬಂದೀತು. ಅದೆಲ್ಲ ಸಿಹಿ ಸುದ್ದಿಯೇ. ಆದರೆ ನಿಮ್ಮ ರಾಗರಂಜನೆಯ ಸಮಯವನ್ನು ಹಾಳಾದ್ದು ಆಫೀಸು ಹಾಳುಮಾಡುತ್ತದೆ. ನೀವಿವತ್ತು , ಅಯ್ಯೋ ಪಾಪ !
ವೃಶ್ಚಿಕ : ಯಾರಿಂದಲೂ ಕಿಂಚಿತ್ತೂ ಸಹಾಯ ಸಿಗುವುದಿಲ್ಲ. ಒಂದು ವ್ಯವಸ್ಥೆ ನಿಮಗೆ ನೆರವು ಕೊಡಲು ಸಾಧ್ಯವಾಗುತ್ತಿಲ್ಲ ಎಂದರೆ ನಿಮ್ಮ ಕಾಲ ಮೇಲೆ ನೀವೇ ನಿಂತುಕೊಳ್ಳುವುದರತ್ತ ನೀವಿನ್ನೂ ಗಮನ ಹರಿಸಿಲ್ಲ ಎಂದಾಯಿತು
ಧನಸ್ಸು: ಇನ್ನೊಬ್ಬರ ರೊಕ್ಕದಲ್ಲಿ ನೀವಿವತ್ತು ರಿಸ್ಕ್ ತೆಗೆದುಕೊಂಡರೆ ಕೆಟ್ಟಿರಿ. ನಿಮ್ಮ ಸ್ನೇಹಿತರು ನಿಮ್ಮನ್ನು ನಂಬಬಹುದು. ಆದರೆ, ಪರಧನ..ಪರಸತಿ...ನೆನಪಿರಲಿ .
ಮಕರ : ರಾಜಿ ಮಾರ್ಗದಲ್ಲಿ ವರ್ತಿಸುವುದು ನಿಮಗೆ ಪಥ್ಯವಲ್ಲ . ಹೌದು ತಾನೆ ? ಅದಕ್ಕೇ ನೆರೆಹೊರೆಯವರು ನಿಮ್ಮನ್ನು ಕಿರಿಕಿರಿ ಪಿರಿಪಿರಿ ಆಸಾಮಿ ಅಂತ ದೂಷಿಸುವರು . ಒಂದು ಸ್ಪಲ್ಪ ಕಾಂಪ್ರಮೈಸ್ ಮಾಡಿಕೊಂಡರೆ ನಿಮ್ಮಪ್ಪನ ಗಂಟೇನು ಹೋಗುತ್ತದೆ ?
ಕುಂಭ : ಮನಸ್ಸಿದ್ದಂತೆ ಮಹದೇವ ಎನ್ನುವಂತೆ ವರ್ತಿಸುವುದು ಅಪಾಯಕರ. ಶಾಂತ ಚಿತ್ತದಿಂದ ಆಲೋಚಿಸಿ, ವರ್ತಿಸಿದರೆ ಅಪಘಾತಗಳಿಂದ ತಪ್ಪಿಸಿಕೊಳ್ಳಬಹುದು. ಕಡೆಯಪಕ್ಷ ಭಾವನಾತ್ಮಕ ಆಕ್ಸಿಡೆಂಟ್ಗಳಿಂದಾದರೂ....
ಮೀನ : ಗಡದ್ದಾದ ತಿಂಡಿ, ತೀರ್ಥ, ಊಟ ! ಇದಕ್ಕಿಂತ ಇನ್ನೇನು ಬೇಕು ? ಕೆಲಸ ಮಾಡುವುದು ಇದ್ದೇ ಇರತ್ತೆ, ಒಂದು ದಿವಸವಾದರೂ ಬಿಂದಾಸ್ ಮಜಾ ಮಾಡೋಣ ಎನ್ನುವ ನಿಮ್ಮ ಬಹುದಿನಗಳ ನಿರೀಕ್ಷೆ ಇಂದು ಕೈಗೂಡುತ್ತದೆ. ಯು ಆರ್ ರಿಯಲಿ ಲಕ್ಕಿ ಟುಡೆ.