ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಯಿ ಬಾಬಾ ಜಯಂತಿ : ಬೆಂಗಳೂರುನಿಂದಪುಟ್ಟಪರ್ತಿಗೆ ವಿಶೇಷ ಬಸ್‌

By Staff
|
Google Oneindia Kannada News

ಬೆಂಗಳೂರು : ಸತ್ಯ ಸಾಯಿಬಾಬರ 75ನೇ ಜನ್ಮ ದಿನಾಚರಣೆಯು ನವೆಂಬರ್‌ 23ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೆಂಗಳೂರಿನಿಂದ ಪುಟ್ಟಪರ್ತಿಗೆ ಒಂದು ದಿನದ ವಿಶೇಷ ನಿಯೋಜಿತ ಪ್ರವಾಸವನ್ನು ನವೆಂಬರ್‌ 19ರಿಂದ ಆರಂಭಿಸಲಿದೆ.

ನಿಗಮದ ವಾಹನವು ಪ್ರತಿ ದಿನ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಅದೇ ದಿನ ರಾತ್ರಿ 10.30ಕ್ಕೆ ಬೆಂಗಳೂರಿಗೆ ಹಿಂತಿರುಗತ್ತದೆ. ಇದಲ್ಲದೆ ಮಹಾನಂದಿ, ಶ್ರೀ ಶೈಲ ಮತ್ತು ನಾಗಾರ್ಜುನ ಸಾಗರ ಸೇರಿದಂತೆ ಹೈದರಾಬಾದ್‌ಗೆ ಐದು ದಿನಗಳ ಪ್ರವಾಸವನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧ ನಿಗಮ ವ್ಯವಸ್ಥೆಗೊಳಿಸಿದೆ.

ಆಸಕ್ತರು ಮುಂದಿನ ವಿಳಾಸವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಪ್ರವಾಸ ನಿರ್ವಾಹಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ನಹಸಿಂಹ ರಾಜ ಚೌಕ, ಬೆಂಗಳೂರು - 560 002, ದೂರವಾಣಿ ಸಂಖ್ಯೆ : 080-2275869 ಮತ್ತು 2275883.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X