Get Updates
Get notified of breaking news, exclusive insights, and must-see stories!

ತಡೆಯಾಜ್ಞೆ ತೆರವಾದೊಡನೆ ರಾಜ್ಯದದೇವರಿಗೆ ಕನ್ನಡದಲ್ಲೇ ಪೂಜೆ

ಬೆಂಗಳೂರು : ಹೈಕೋರ್ಟ್‌ನಲ್ಲಿರುವ ತಡೆಯಾಜ್ಞೆ ತೆರವಾಗುತ್ತಿದ್ದಂತೆಯೇ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ದೇವರಿಗೆ ಕನ್ನಡದಲ್ಲಿಯೇ ಪೂಜೆ ನಡೆಸಲಾಗುವುದು ಎಂದು ಮುಜರಾಯಿ ಖಾತೆ ಸಚಿವ ಬಾಬೂರಾವ್‌ ಚಿಂಚನ್‌ಸೂರ್‌ ಶುಕ್ರವಾರ ತಿಳಿಸಿದ್ದಾರೆ.

ರಾಜ್ಯದ ಎಲ್ಲ ದೇವಾಲಯಗಳಲ್ಲೂ ನಮ್ಮದೇ ಆದ ಸರಳ ಸುಂದರ ಕನ್ನಡ ಭಾಷೆಯಲ್ಲಿ ಪೂಜೆ ನಡೆಯಬೇಕೆಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಅದರಂತೆ ನಾವು ಆಗಮ ಸಲಹಾ ಸಮಿತಿಯನ್ನೂ ರಚಿಸಿದ್ದೇವೆ. ಆದರೆ, ಈ ಸಮಿತಿ ಕಾರ್ಯ ನಿರ್ವಹಿಸದಂತೆ ತಡೆಯಾಜ್ಞೆ ಇರುವುದರಿಂದ, ವ್ಯವಸ್ಥೆಯನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದಲ್ಲಿ 43,217 ದೇವಸ್ಥಾನಗಳಿವೆ. 22,887 ಮಂದಿ ಅರ್ಚಕರಿದ್ದಾರೆ. ಇವರಲ್ಲಿ 427 ಜನ ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದ ಅವರು, ದಲಿತ ಅರ್ಚಕರ ಸಂಖ್ಯೆ ಹೆಚ್ಚಿಸಲು ದಲಿತರಿಗೆ ಆಗಮ ಶಾಸ್ತ್ರ ಕಲಿಸಬೇಕಾಗಿದೆ ಎಂದೂ ತಿಳಿಸಿದರು. ಮೂರು ವರ್ಷಗಳ ಆಗಮಾಧ್ಯಯನಕ್ಕೆ ಬದಲಾಗಿ ಅಲ್ಪಾವಧಿಯ ತರಬೇತಿ ನೀಡುವ ಉದ್ದೇಶವೂ ಇದೆ. ಇದಕ್ಕಾಗಿಯೇ ಆಗಮ ವಿದ್ಯಾ ಸಂಸ್ಥೆ ರಚಿಸಲಾಗುವುದು, ಅರ್ಚಕರಿಗೆ ಹೆಚ್ಚು ಗೌರವ ಧನ ನೀಡಲು ಏಕರೂಪದ ಶಾಸನ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಶಾಸಕ ಸಿದ್ದಲಿಂಗಯ್ಯ ಅವರಿಗೆ ಮೇಲ್ಮನೆಯಲ್ಲಿ ನೀಡಿದ ಉತ್ತರದಲ್ಲಿ ತಿಳಿಸಿದರು.

ಹೆಣ್ಣು ದೇವರುಗಳಿಗೆ ಪೂಜೆ ಮಾಡಲು ಮಹಿಳಾ ಅರ್ಚಕರ ನೇಮಕ ಮಾಡಬೇಕು ಎಂಬ ಸಲಹೆಯೂ ಎಸ್‌. ಚನ್ನ ಬಸವಯ್ಯ ಅವರಿಂದ ಬಂತು.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+