ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಷ್ಟ್ರೀಯ ಬಾಲ ಸಾಹಿತ್ಯ ಗೋಷ್ಠಿಗೆ ಸಿಸು ಸಂಗಮೇಶ
ಬಿಜಾಪುರ: ಡಿಸೆಂಬರ್ 1ರಿಂದ 3ರವರೆಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಬಾಲ ಸಾಹಿತ್ಯ ಗೋಷ್ಠಿಯಲ್ಲಿ ರಾಜ್ಯದ ಖ್ಯಾತ ಮಕ್ಕಳ ಸಾಹಿತಿ ‘ಸಿಸು’ ಸಂಗಮೇಶ ಅವರು ಭಾಗವಹಿಸಲಿದ್ದಾರೆ.
20 ನೆಯ ಶತಮಾನದಲ್ಲಿ ಭಾರತೀಯ ಬಾಲಸಾಹಿತ್ಯ ಮತ್ತು ಭಾರತದ ವಿವಿಧ ಭಾಷೆಯ ಬಾಲ ಸಾಹಿತ್ಯದ ಕುರಿತು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಲೇಖಕರು ಮತ್ತು ಪ್ರಕಾಶಕರು ಭಾಗವಹಿಸುವ ಈ ಕಾರ್ಯ ಕ್ರಮಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷರು ಮತ್ತು ಮಕ್ಕಳ ಸಾಹಿತಿ ಆಗಿರುವ ‘ಸಿಸು’ ಸಂಗಮೇಶ ಅವರನ್ನು ಆಹ್ವಾನಿಸಲಾಗಿದೆ ಎಂದು ರಾಷ್ಟ್ರೀಯ ಬಾಲ ಭವನದ ನಿರ್ದೇಶಕ ಡಾ. ಮಧು ಪಂತ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Thursday, November 16, 2000, 5:30 [IST]