ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ ಬಿಡುಗಡೆಗೆ ಒತ್ತೆ ಹಣ ನೀಡಿಲ್ಲ - ಶಿವರಾಜ್ಕುಮಾರ್
ಬೆಂಗಳೂರು : ವೀರಪ್ಪನ್ ಹಿಡಿತದಿಂದ ತಮ್ಮ ತಂದೆಯನ್ನು ಬಿಡಿಸಿಕೊಳ್ಳಲು ಒತ್ತೆ ಹಣ ನೀಡಿಲ್ಲ ಎಂದು ರಾಜ್ ಅವರ ಹಿರಿಯ ಪುತ್ರ ಶಿವರಾಜ್ಕುಮಾರ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
ರಾಜ್ ಅವರನ್ನು ಬಿಡಿಸಿಕೊಳ್ಳಲು ಚಲನಚಿತ್ರ ಉದ್ಯಮಿಗಳೂ ಸೇರಿದಂತೆ ವಿವಿಧ ಕಡೆಗಳಿಂದ ಬೃಹತ್ ಮೊತ್ತದ ಹಣ ಸಂಗ್ರಹಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಗೆ ಪ್ರತಿಕ್ರಿಯಿಸಿರುವ ಅವರು, ಈ ಸಂಬಂಧ ಯಾವ ಯತ್ನಗಳೂ ನಡೆದಿಲ್ಲ ಎಂದು ಹೇಳಿದ್ದಾರೆ.
ತಮ್ಮ ತಂದೆ ಬೆಂಗಳೂರಿಗೆ ಬಂದ ನಂತರ 4 ದಿನ ವಿಶ್ರಾಂತಿ ತೆಗೆದುಕೊಳ್ಳುವರು. ಆ ನಂತರ ತಮ್ಮ ಇಡೀ ಕುಟುಂಬ, ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಮತ್ತು ಹಿರಿಯ ಅಧಿಕಾರಿಗಳನ್ನು ಅಭಿನಂದಿಸಲು ಚೆನ್ನೈಗೆ ತೆರಳಲಿದೆ ಎಂದು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ರಾಜ್ ಬಿಡುಗಡೆ
Comments
Story first published: Thursday, November 16, 2000, 5:30 [IST]