ರಾಜ್ ಕರೆತರಲು ಕೊಯಮತ್ತೂರಿಗೆ ಹೋದ ಖಾಸಗಿ ವಿಮಾನ
ಬೆಂಗಳೂರು : ಬಿಡುಗಡೆಯ ನಂತರ ಕೊಯಮತ್ತೂರು ಬಳಿ ಚಿಕಿತ್ಸೆ ಪಡೆಯುತ್ತಿರುವ ವರನಟ ಡಾ.ರಾಜ್ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲು ಖಾಸಗಿ ವಿಮಾನವೊಂದು ಕೊಯಮತ್ತೂರಿಗೆ ತೆರಳಿದೆ. ಗುರುವಾರ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಡಾ. ರಾಜ್ಕುಮಾರ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಈ ಮುನ್ನ ಡಾ. ರಾಜ್ ಅವರನ್ನು ಸರಕಾರದ ಹೆಲಿಕಾಪ್ಟರ್ನಲ್ಲಿ ಕರೆತರಲಾಗುವುದು ಎಂದು ಹೇಳಲಾಗಿತ್ತು. 109 ದಿನಗಳ ಅರಣ್ಯ ವಾಸದಿಂದ ಬಳಲಿರುವ ಡಾ. ರಾಜ್ಕುಮಾರ್ ಆರೋಗ್ಯವಾಗಿದ್ದು, ಅವರೀಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಔಷಧೋಪಚಾರವೂ ನಡೆಯುತ್ತಿದೆ. ರಾಜ್ ಅವರಿಗೆ ಸಂಪೂರ್ಣ ಪೊಲೀಸ್ ರಕ್ಷಣೆ ನೀಡಲಾಗಿದೆ. ಆದರೆ, ರಾಜ್ಕುಮಾರ್ ಅವರು ಎಲ್ಲಿದ್ದಾರೆ ಎಂಬುದು ಮಾತ್ರ ತಿಳಿದುಬಂದಿಲ್ಲ. ರಾಜ್ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆದಿದೆ.
ಈ ಮಧ್ಯೆ ಬೆಂಗಳೂರಿನಲ್ಲಿ ರಾಜ್ ಆಗಮನದ ಸಂತಸ ಮುಗಿಲು ಮುಟ್ಟಿದೆ. ವಿಜಯೋತ್ಸಾಹ ವಿಜೃಂಭಿಸುತ್ತಿದೆ. ನಗರದ ಹಲವಾರು ಕನ್ನಡ ಸಂಘ ಸಂಸ್ಥೆಗಳು, ತಮ್ಮ ಬಡಾವಣೆಗಳಲ್ಲಿ ಕನ್ನಡ ಬಾವುಟವನ್ನು ಕಟ್ಟಿ, ತಳಿರು ತೋರಣಗಳಿಂದ ಅಲಂಕರಿಸಿವೆ. ಧ್ವನಿವರ್ಧಕಗಳಲ್ಲಿ ಡಾ. ರಾಜ್ಕುಮಾರ್ ಹಾಡಿರುವ ಗೀತೆಗಳು ಮೊಳಗುತ್ತಿವೆ. ಬುಧವಾರ ಕನ್ನಡದ ಎಲ್ಲ ಟಿ.ವಿ. ಚಾನೆಲ್ಗಳೂ ಡಾ. ರಾಜ್ಕುಮಾರ್ ಅಭಿನಯದ ಚಲನಚಿತ್ರಗಳನ್ನು ಪ್ರಸಾರ ಮಾಡಿದವು. ಗುರುವಾರವೂ ಟಿ.ವಿ. ಚಾನೆಲ್ಗಳು ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ.
ಫಲಕಗಳು: ರಾಜಾ ನಮ್ಮ ರಾಜಾ, ಅಣ್ಣಾವ್ರು ನಾಡಿಗೆ ಬಂದರು, ಕರ್ನಾಟಕ ರತ್ನನನ್ನು ಕನ್ನಡ ತಾಯಿ ಕಾಪಾಡಿದಳು, ನಮ್ಮೆಲ್ಲರ ರಾಜಣ್ಣ ನೂರ್ಕಾಲ ಬಾಳಲಿ , ರಾಜ್ಕುಮಾರ್ಗೆ ಜೈ ಎಂಬಿತ್ಯಾದಿ ಫಲಕಗಳು ರಾರಾಜಿಸುತ್ತಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸದಾಶಿವ ನಗರದ ಡಾ. ರಾಜ್ಕುಮಾರ್ ಅವರ ನಿವಾಸದ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ.
ರಾಜ್ಕುಮಾರ್ ವಿಶೇಷ ವಿಮಾನದಲ್ಲಿ ಬರುತ್ತಾರೆ ಎಂಬ ಸುದ್ದಿ ಟಿ.ವಿ. ನ್ಯೂಸ್ನಲ್ಲಿ ಪ್ರಸಾರವಾಗುತ್ತಿದ್ದಂತೆಯೇ ನೂರಾರು ರಾಜ್ ಅಭಿಮಾನಿಗಳು ಬೆಂಗಳೂರು ವಿಮಾನ ನಿಲ್ದಾಣದತ್ತ ಹೊರಟಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಹೋಮ - ಹವನ : ರಾಜ್ ಅಪಹರಣವಾದ ದಿನದಿಂದಲೂ ಸಾವಿರಾರು ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ, ಹೋಮ, ಹವನ ನಡೆಸಿದ್ದರು. ಉರುಳು ಸೇವೆಯೂ ನಡೆದಿತ್ತು. ರಾಜ್ ಬಿಡುಗಡೆಯ ನಂತರವೂ ಚಿತ್ರನಟರು, ಅಭಿಮಾನಿಗಳು ದೇವರನ್ನು ಮರೆತಿಲ್ಲ. ಬುಧವಾರ ರಾಜ್ಯದ ಹಲವಾರು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಇಂದು (ಗುರುವಾರ) ರೆಬೆಲ್ ಸ್ಟಾರ್ ಅಂಬರೀಶ್ ತಮ್ಮ ಮನೆಯಲ್ಲಿ ಹೋಮ ಮಾಡುತ್ತಿದ್ದಾರೆ.
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications