ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನನ್ನ ಬಿಡುಗಡೆ ಕನ್ನಡಿಗರು- ತಮಿಳರ ಸೌಹಾರ್ದಕ್ಕೆ ಪ್ರೇರಕ : ರಾಜ್
ಮುಲಾಯನೂರು (ತಮಿಳುನಾಡು) : ವೀರಪ್ಪನ್ ನನ್ನನ್ನು ಅಪಹರಿಸಿದ್ದು ವಿಧಿ ಲೀಲೆ. ಆದರೆ ಈಗ ನನ್ನನ್ನು ಬಿಡುಗಡೆ ಮಾಡಿರುವುದರಿಂದ ಕರ್ನಾಟಕ ಮತ್ತು ತಮಿಳುನಾಡಿನ ಕನ್ನಡಿಗರು ಹಾಗೂ ತಮಿಳರು ಸೌಹಾರ್ದಯುತವಾಗಿ ಇರಲು ಸಾಧ್ಯವಾಗಿದೆ ಎಂದು ರಾಜ್ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ತಮಿಳು ಮನಿಲಾ ಕಾಂಗ್ರೆಸ್ ಅಧ್ಯಕ್ಷ ರಾಮರಾಜನ್ ಅವರ ಭೂತಪಾಡಿಯ ನಿವಾಸದಲ್ಲಿ ಗುರುವಾರ ಮುಂಜಾನೆ ಬೆಂಗಳೂರಿಗೆ ಹೊರಡುವ ವಿಶೇಷ ಹೆಲಿಕಾಪ್ಟರ್ ಹತ್ತುವ ಮುನ್ನ ರಾಜ್, ಸಂಕ್ಷಿಪ್ತ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ನನ್ನ ಹಣೆಬರಹ ವೀರಪ್ಪನ್ ನನ್ನನ್ನು ಅಪಹರಿಸುವಂತೆ ಮಾಡಿತು. ಆದರೆ ಒತ್ತೆಯಿಂದ ಸುರಕ್ಷಿತವಾಗಿ ನಾನು ಹೊರ ಬಂದಿರುವುದು ಉಭಯ ರಾಜ್ಯಗಳ ಕನ್ನಡಿಗರು ಮತ್ತು ತಮಿಳರು ಇನ್ನು ಮುಂದೆ ಸಹೋದರ ಭಾವನೆಯಿಂದ ಇರಲು ಪ್ರೇರೇಪಿಸಿದೆ ಎಂದು ರಾಮರಾಜ್ ಅವರ ಮನೆಯಲ್ಲೇ ಬುಧವಾರ ರಾತ್ರಿ ಕಳೆದಿರುವ ರಾಜ್ ಹೇಳಿದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಬಿಡುಗಡೆ
Comments
Story first published: Thursday, November 16, 2000, 5:30 [IST]