ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮರಳಿ ಬಂದ ಮುತ್ತು ’: ದೂರದರ್ಶನದ ವಿಶೇಷ ಕಾರ್ಯಕ್ರಮ

By Staff
|
Google Oneindia Kannada News

ಬೆಂಗಳೂರು : 109 ದಿನಗಳ ವನವಾಸದಿಂದ ಮರಳಿ ಬಂದ ಕರ್ನಾಟಕದ ಮುತ್ತುರಾಜ್‌ (ರಾಜ್‌ಕುಮಾರ್‌) ಕುರಿತಾದ ವಿಶೇಷ ಕಾರ್ಯಕ್ರಮ ‘ಮರಳಿ ಬಂದ ಮುತ್ತು ’ ಗುರುವಾರ ಸಂಜೆ 7-30ರಿಂದ 8 ಗಂಟೆಯ ವರೆಗೆ ಬೆಂಗಳೂರು ದೂರದರ್ಶನ (ಡಿಡಿ1)ದಲ್ಲಿ ಪ್ರಸಾರವಾಗಲಿದೆ.

ಇದೇ ಕಾರ್ಯಕ್ರಮವು ಡಿಡಿ.9 ಚಂದನ ವಾಹಿನಿಯಲ್ಲಿ ನವೆಂಬರ್‌ 17ರಂದು ಬೆಳಗ್ಗೆ 8.15ಕ್ಕೆ ಮರು ಪ್ರಸಾರ ಆಗಲಿದೆ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ಪ್ರಕಟಣೆ ತಿಳಿಸಿದೆ.

ಖಾಸಗಿ ಟಿ.ವಿ. ಚಾನೆಲ್‌ಗಳಲ್ಲೂ ಸಹ ರಾಜ್‌ಕುಮಾರ್‌ ಕುರಿತಾದ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ರಾಜ್‌ ಬಿಡುಗಡೆಯ ನಂತರದ ಬೆಳವಣಿಗೆಗಳ ಸುದ್ದಿ, ರಾಜ್‌ಕುಮಾರ್‌ ಹಾಡಿರುವ ಹಾಡುಗಳು, ಅವರ ಅಭಿನಯದ ಚಲನಚಿತ್ರಗಳು ಪ್ರಸಾರವಾಗುತ್ತಿವೆ.

ವರನಟನಿಗೆ ಸುಸ್ವಾಗತ ಕೋರುವ ಭಾರಿ ಬ್ಯಾನರ್‌ಗಳು ಬೆಂಗಳೂರಿನೆಲ್ಲೆಡೆ ಹಾರಾಡುತ್ತಿವೆ. ಮಾಧ್ಯಮಗಳು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ತಮ್ಮದೇ ಆದ ರೀತಿಯಲ್ಲಿ ರಾಜ್‌ ಬಿಡುಗಡೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿವೆ.

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X