ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಣಜಿ : ಮೊದಲ ದಿನ 14 ವಿಕೆಟ್‌ ಪತನ

By Staff
|
Google Oneindia Kannada News

ಬೆಳಗಾವಿ : ಇಲ್ಲಿನ ಜಿಂಖಾನ ಮೈದಾನದಲ್ಲಿ ಬುಧವಾರದಿಂದ ಶುರುವಾರ ಕರ್ನಾಟಕ ಮತ್ತು ಆಂಧ್ರ ಪ್ರದೇಶ ತಂಡಗಳ ರಣಜಿ ಕ್ರಿಕೆಟ್‌ ಪಂದ್ಯದಲ್ಲಿ , ದಿನದ ಕೊನೆಗೆ ಕರ್ನಾಟಕ ತಂಡ 4 ವಿಕೆಟ್‌ಗಳ ನಷ್ಟಕ್ಕೆ 90 ರನ್‌ ಗಳಿಸಿತ್ತು .

14 ವಿಕೆಟ್‌ಗಳು ಉರುಳಿದ್ದು ಮೊದಲ ದಿನದಾಟದ ವಿಶೇಷ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಂಧ್ರಪ್ರದೇಶ ಕೇವಲ 195 ರನ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ತೆಲುಗು ಬಿಡ್ಡರ ಪಾಲಿಗೆ ಮಾರಕವಾಗಿ ಪರಿಣಮಿಸಿದ ಮನ್ಸೂರ್‌ ಆಲಿಖಾನ್‌ ಮತ್ತು ಸಂತೋಷ್‌ ವಡೆಯರಾಜ್‌ ತಲಾ 3 ವಿಕೆಟ್‌ ಕಬಳಿಸಿದರು. ದೊಡ್ಡ ಗಣೇಶ್‌ ಮತ್ತು ಆನಂದ ಯಲವಗಿ ತಲಾ 2 ವಿಕೆಟ್‌ ಗಳಿಸಿದರು. ಆಂಧ್ರದ ಪರ ವೇಣುಗೋಪಾಲ ರಾವ್‌ 42, ಕೆ.ಎಚ್‌. ಶಹಾಬುದ್ದೀನ್‌ 33 ಹಾಗೂ ವಾಟೇಕರ್‌ 27 ರನ್‌ ಗಳಿಸಿದರು.

ಕರ್ನಾಟಕದ ಆರಂಭವೇನೂ ಉತ್ತಮವಾಗಿರಲಿಲ್ಲ . ವೇಗಿ ಶಹಾಬುದ್ದೀನ್‌ ಅವರು ಮೊದಲ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಮತ್ತೊಂದು ವಿಕೆಟ್‌ ವಾಟೇಕರ್‌ ಪಾಲಾಯಿತು. ನಾಯಕ ಅರುಣ್‌ ಕುಮಾರ್‌ 27 ರನ್‌ ಗಳಿಸಿ ಔಟಾದರು. ಆಟ ಮುಗಿದಾಗ 21 ರನ್‌ ಗಳಿಸಿದ ತಿಲಕ್‌ ನಾಯ್ಡು ಹಾಗೂ 5 ರನ್‌ ಗಳಿಸಿದ್ದ ಬಿ. ಅಖಿಲ್‌ ಕ್ರೀಸ್‌ನಲ್ಲಿದ್ದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X