ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಕುಮಾರ್ ಬಿಡುಗಡೆ : ಅಟಲ್ ಬಿಹಾರಿ ವಾಜಪೇಯಿ ಸಂತಸ
ನವದೆಹಲಿ : ನನಗೊಂದು ಸಿಹಿ ಸುದ್ದಿ ಬಂದಿದೆ. ವೀರಪ್ಪನ್ ಒತ್ತೆಯಲ್ಲಿದ್ದ ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಬಿಡುಗಡೆ ಆಗಿದ್ದಾರೆ ಎಂದು ಸಂತಸದಿಂದ ಬೀಗುತ್ತಿದ್ದ ರಾಷ್ಟ್ರದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ನಿವಾಸದಲ್ಲಿ ಬುಧವಾರ ತಿಳಿಸಿದ್ದಾರೆ.
ಪ್ರಧಾನಿಯವರಿಗೆ ಸುದ್ದಿ ಸಂಸ್ಥೆಯಾಂದು ವರದಿ ಮಾಡಿರುವ ಈ ವಿಷಯವನ್ನು ಪ್ರಧಾನಿ ಕಾರ್ಯಾಲಯದ ಸಿಬ್ಬಂದಿ ತಿಳಿಸಿದ್ದಾರೆ. ನವಜಾತ ಶಿಶುಗಳ ಸಪ್ತಾಹವನ್ನು ತಮ್ಮ ನಿವಾಸದಲ್ಲಿ ಉದ್ಘಾಟಿಸಿದ ಸಂದರ್ಭದಲ್ಲಿ ಈ ವಿಷಯ ಪ್ರಕಟಿಸಿದರು.
ಪ್ರಧಾನಿಯವರು ಈ ಸಂತಸದ ಸುದ್ದಿಯನ್ನು ಪ್ರಕಟಿಸಿದ ಸಂದರ್ಭದಲ್ಲಿ ಕೇಂದ್ರ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಸಚಿವ ಸಿ.ಪಿ. ಠಾಕೂರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ರಾಜ್ಯ ಸಚಿವೆ ಸುಮಿತ್ರಾ ಮಹಾಜನ್, ಆರೋಗ್ಯ ಖಾತೆ ರಾಜ್ಯ ಸಚಿವ ಎ. ರಾಜಾ ಹಾಗೂ ವಿದೇಶೀ ನಿಯೋಗಗಳ ಗಣ್ಯರು ಉಪಸ್ಥಿತರಿದ್ದರು.
(ಯು.ಎನ್.ಐ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಅಪಹರಣ
Comments
Story first published: Wednesday, November 15, 2000, 5:30 [IST]