ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಶ್ರೀರಾಮನೇ 14 ವರ್ಷ ವನವಾಸ ಮಾಡಿರುವಾಗ ನನ್ನದೇನು ಮಹಾ’

By Staff
|
Google Oneindia Kannada News

ಚೆನ್ನೈ : ರಾಜ್‌ಕುಮಾರ್‌ ಅವರು ಬಿಡುಗಡೆಯಾದ ಬಳಿಕ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು, ಅವರು ಸಂಪೂರ್ಣವಾಗಿ ಬಳಲಿದ್ದಾರೆ ಎಂಬುದನ್ನು ಅವರ ಧ್ವನಿಯೇ ಹೇಳುತ್ತಿತ್ತು. ರಾಜ್‌ಕುಮಾರ್‌ ಅವರು ಮೊದಲು ಬೆಂಗಳೂರಿಗೆ ಹೋಗಿ ತಮ್ಮ ಹೆಂಡತಿ ಮಕ್ಕಳನ್ನು ನೋಡಿದ ಬಳಿಕ ಮೂರ್ನಾಲ್ಕು ದಿನದ ನಂತರ ಚೆನ್ನೈಗೆ ಬರುವುದಾಗಿ ತಿಳಿಸಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿದ್ದಾರೆ.

ಈ ವಯಸ್ಸಿನಲ್ಲಿ ನೀವು ಮೂರು ತಿಂಗಳು ಕಾಡಿನಲ್ಲಿ ಇರಬೇಕಾದ ಸ್ಥಿತಿ ಬಂದಿತಲ್ಲಾ ಎಂದು ನಾನು ಹೇಳಿದಾಗ, ರಾಜ್‌ಕುಮಾರ್‌ ಅವರು, ಭಗವಂತನಾದ ಶ್ರೀರಾಮಚಂದ್ರನೇ 14 ವರ್ಷ ವನವಾಸ ಮಾಡಿರುವಾಗ ನನ್ನದೇನು ಮಹಾ ಬಿಡಿ ಎಂದರು ಎಂದು ಕರುಣಾನಿಧಿ ತಿಳಿಸಿದರು.

ಮುರಸೋಳಿ ಮಾರನ್‌ ಆರೋಗ್ಯ ವಿಚಾರಿಸಿದ ರಾಜ್‌ : ತಮ್ಮೊಂದೆ ಫೋನ್‌ನಲ್ಲಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಡಾ. ರಾಜ್‌ಕುಮಾರ್‌ ಅವರು ಕೇಂದ್ರ ವಾಣಿಜ್ಯ ಸಚಿವ ಮುರಸೋಳಿ ಮಾರನ್‌ ಅವರ ಆರೋಗ್ಯದ ಬಗ್ಗೆಯೂ ವಿಚಾರಿಸಿದರು ಎಂದು ಕರುಣಾನಿಧಿ ಹೇಳಿದರು. ಈಗಾಗಲೇ ಈರೋಡ್‌ ತಲುಪಿರುವ ರಾಜ್‌ಕುಮಾರ್‌ ಹಾಗೂ ನಾಗೇಶ್‌ ಅವರು ಬುಧವಾರ ಅಥವಾ ಗುರುವಾರ ಬೆಂಗಳೂರಿಗೆ ತೆರಳುತ್ತಾರೆ ಎಂದೂ ಅವರು ವಿವರಿಸಿದರು.

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X