ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಯಮತ್ತೂರಿನಿಂದ ವಿಮಾನದಲ್ಲಿ ರಾಜ್‌ಕುಮಾರ್‌ ಬೆಂಗಳೂರಿಗೆ

By Staff
|
Google Oneindia Kannada News

ಕೊಯಮತ್ತೂರು: ಮಂಗಳವಾರ ರಾತ್ರಿಯೇ ಕಾಡುಗಳ್ಳ ವೀರಪ್ಪನ್‌ ಡಾ. ರಾಜ್‌ಕುಮಾರ್‌ ಹಾಗೂ ನಾಗೇಶ್‌ ಅವರನ್ನು ಬಿಡುಗಡೆ ಮಾಡಿದ್ದು, ಈಹೊತ್ತು ರಾಜ್‌ಕುಮಾರ್‌ ತಮಿಳುನಾಡಿನ ಭವಾನಿ ಬಳಿಯಿರುವ ಅವಲಪೂಇಂದ್‌ ಸರಕಾರಿ ಅತಿಥಿಗೃಹದಲ್ಲಿ ಪೊಲೀಸ್‌ ರಕ್ಷಣೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ.

ಬುಧವಾರ ಮಧ್ಯಾಹ್ನ ಬಹುತೇಕ ರಾಜ್‌ಕುಮಾರ್‌ ಅವರನ್ನು ಕೊಯಮತ್ತೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಕರೆತರಲಾಗುವುದು ಎಂದು ತಿಳಿದು ಬಂದಿದೆ. ಮಾಧ್ಯಮ ಪ್ರತಿನಿಧಿಗಳು ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ರಾಜ್‌ಕುಮಾರ್‌ ಅವರ ಬರುವಿಕೆಗಾಗಿ ಕಾಯುತ್ತಿದ್ದಾರೆ. ರಾಜ್‌ ಅವರನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆತರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಚಂದ್ರೇಗೌಡ ಹೇಳಿಕೆ : ಕರ್ನಾಟಕ ರತ್ನ ಡಾ. ರಾಜ್‌ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪ ನ್‌ ಬಿಡುಗಡೆ ಮಾಡಿದ್ದು, ಅವರು ಈರೋಡ್‌ ತಲುಪಿದ್ದಾರೆ ಎಂದು ಕರ್ನಾಟಕ ಸಂಸದೀಯ ವ್ಯವಹಾರಗಳ ಹಾಗೂ ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ ತಿಳಿಸಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X