ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ವತಮ್ಮ ಚೆನ್ನೈಗೆ, ಶಿವರಾಜ್‌- ರಾಘವೇಂದ್ರ ಈರೋಡ್‌ಗೆ

By Staff
|
Google Oneindia Kannada News

ಬೆಂಗಳೂರು : ವೀರಪ್ಪನ್‌ ಒತ್ತೆಯಿಂದ ಬಿಡುಗಡೆಯಾಗಿರುವ ತಮ್ಮ ಪತಿಯನ್ನು ನೋಡಲು ಪಾರ್ವತಮ್ಮ ರಾಜ್‌ಕುಮಾರ್‌ ಚೆನ್ನೈಗೆ ಪ್ರಯಾಣ ಬೆಳೆಸಿದ್ದು, ಪುತ್ರರಾದ ಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಈರೋಡ್‌ಗೆ ಹೋಗಿದ್ದಾರೆ.

ಬುಧವಾರ ಸಂಜೆ ಹೊತ್ತಿಗೆ ವರನಟ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ ಎಂದು ಅಖಿಲ ಕರ್ನಾಟಕ ರಾಜ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ತಿಳಿಸಿದ್ದಾರೆ. ರಾಜ್‌ ಬಿಡುಗಡೆಯ ವದಂತಿಗಳನ್ನು ಪಾರ್ವತಮ್ಮ ಹಾಗೂ ರಾಜ್‌ ಪುತ್ರರು ಮೊದಲು ನಂಬಲಿಲ್ಲ. ಸ್ವತಃ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರೇ ಬಿಡುಗಡೆ ವಿಚಾರವನ್ನು ಖಾತ್ರಿ ಪಡಿಸಿದ ನಂತರವೇ ರಾಜ್‌ ಕುಟುಂಬದ ಸದಸ್ಯರು ಚೆನ್ನೈ ಹಾಗೂ ಈರೋಡ್‌ಗೆ ಪ್ರಯಾಣ ಬೆಳೆಸಿದರೆನ್ನಲಾಗುತ್ತಿದೆ.

ಈಹೊತ್ತಿನವರೆಗೂ ಮುಖ್ಯಮಂತ್ರಿ ಕೃಷ್ಣ , ರಾಜ್‌ ಬಿಡುಗಡೆಯನ್ನು ದೃಢಪಡಿಸಿಲ್ಲ. ಕಾಡಿನಿಂದ ಚೆನ್ನೈ ಗೆ ಬರುವ ಮಾರ್ಗದಲ್ಲಿ ಮೊದಲು ಸಿಗುವ ಸ್ಥಳ ಈರೋಡ್‌ ಆದ್ದರಿಂದ ತಮ್ಮ ತಂದೆಯನ್ನು ನೋಡುವ ತವಕ ಶಿವರಾಜ್‌ ಹಾಗೂ ರಾಘವೇಂದ್ರ ಅವರದು. ಈರೋಡಿಗೆ ತಲುಪಿದ ನಂತರ ರಾಜ್‌, ನಾಗೇಶ್‌ ಹಾಗೂ ಸಂಧಾನಕಾರರು ಅಲ್ಲಿ ಸ್ವಲ್ವ ಹೊತ್ತು ಸುಧಾರಿಸಿಕೊಳ್ಳಲಿದ್ದಾರೆ. ಅವರನ್ನು ಈರೋಡ್‌ನಿಂದ ನೇರ ಬೆಂಗಳೂರಿಗೆ ಕಳುಹಿಸುವುದೋ ಅಥವಾ ಚೆನ್ನೈಗೆ ಒಯ್ಯುವುದೋ ಎಂಬುದನ್ನು ಈರೋಡ್‌ನಲ್ಲಿ ನಿರ್ಧರಿಸಲಾಗುವುದು ಎನ್ನಲಾಗಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X