ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟಾಡಾ ಬಂಧಿಗಳ ವಿಚಾರಣೆಗೆ ವಿಶೇಷ ನ್ಯಾಯಾಧೀಶರು : ಹೈಕೋರ್ಟ್ ಅಸ್ತು
ಬೆಂಗಳೂರು : ಎಂಟು ವರ್ಷಗಳಿಂದ ಮೈಸೂರು ಜೈಲಿನಲ್ಲಿ ಕೊಳೆಯುತ್ತಿರುವ ಟಾಡಾ ಬಂಧಿಗಳ ಮೇಲಿನ ಆರೋಪಗಳ ಶೀಘ್ರ ವಿಚಾರಣೆ ಸಂಬಂಧ ವಿಶೇಷ ನ್ಯಾಯಾಧೀಶರನ್ನು ನೇಮಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ರಾಜ್ಯ ಹೈಕೋರ್ಟ್ ಮಂಗಳವಾರ ಒಪ್ಪಿಗೆ ಕೊಟ್ಟಿದೆ.
1992- 93 ರಲ್ಲಿ ವೀರಪ್ಪನ್ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಆರೋಪದ ಮೇಲೆ 121 ಮಂದಿಯನ್ನು ಮೇಲೆ ಟಾಡಾ ಕಾಯ್ದೆಯಡಿ ಬಂಧಿಸಲಾಗಿತ್ತು . ಅವರಲ್ಲಿ 71 ಜನ ಷರತ್ತಿನ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರೆ, ಉಳಿದವರು ಜಾಮೀನಿನ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ, ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಪ್ರಸ್ತುತ ಜೈಲಿನಲ್ಲಿರುವ ಖೈದಿಗಳ ವಿರುದ್ಧದದ ಆರೋಪಗಳ ವಿಚಾರಣೆಗೆ ವಿಶೇಷ ನ್ಯಾಯಾಧೀಶರ ನೇಮಕಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಿರುವುದರಿಂದ, ವಿಚಾರಣೆ ತ್ವರಿತವಾಗಿ ಕೊನೆಯಾಗುವುದೆನ್ನುವ ಆಶಾಭಾವನೆ ಮೂಡಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಅಪಹರಣ
Story first published: Tuesday, November 14, 2000, 5:30 [IST]