ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾಮರಾವ್ ಮನೆಯಲ್ಲಿ ಕದ್ದವನ ಬಂಧನ
ಬೆಂಗಳೂರು : ಸಂಯುಕ್ತ ಕರ್ನಾಟಕ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶಾಮರಾವ್ ಅವರ ಮನೆಯಲ್ಲಿ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನಿ ಮೂಲದ ವ್ಯಕ್ತಿಯಾಬ್ಬನನ್ನು ಚಿಕ್ಕಪೇಟೆ ಪೊಲೀಸರು ಬಂಧಿಸಿದ್ದಾರೆ.
ಶಾಮರಾವ್ ಅವರ ರಾಜಾಜಿನಗರದ ಮನೆಯಲ್ಲಿ 5 ಲಕ್ಷ ರುಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವಾಗಿತ್ತು. ಪೊಲೀಸರು ಬಂಧಿಸಿರುವ ರಾಜಾಸ್ತಾನದ ಆರೋಪಿ ವಿರುದ್ಧ ಕಳೆದ ವರ್ಷ ಚಿಕ್ಕ ಪೇಟೆ ಹಾಗೂ ಅಲಸೂರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಜೈಲುವಾಸವನ್ನೂ ಅನುಭವಿಸಿದ್ದ. ಶಿಕ್ಷೆಯ ಅವಧಿ ಮುಗಿದು ಬಿಡುಗಡೆಯಾದ ನಂತರವೂ ತನ್ನ ಹಳೆ ಚಾಳಿಯನ್ನೇ ಮುಂದುವರೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಊರು
ಕೇರಿ
Comments
Story first published: Tuesday, November 14, 2000, 5:30 [IST]