Get Updates
Get notified of breaking news, exclusive insights, and must-see stories!

ನಿರ್ಲಕ್ಷ್ಯಕ್ಕೊಳಗಾಗಿರುವ ಸರ್‌.ಎಂ.ವಿಶ್ವೇಶ್ವರಯ್ಯನವರ ಸಮಾಧಿ

Sir M. Vishweshwaraiahಬೆಂಗಳೂರು : ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಭಾರತರತ್ನ ಸರ್‌.ಎಂ. ವಿಶ್ವೇಶ್ವರಯ್ಯನವರ ಸಮಾಧಿ ಸ್ಥಳ ಸರ್ಕಾರ ಹಾಗೂ ಸಾರ್ವಜನಿಕರಿಂದ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿರುವ ವಿಷಯ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಮಾರ್ಧನಿಸಿತು.

ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಬಿ.ಜೆ.ಪಿ.ಯ ಡಾ. ಎಂ.ಆರ್‌. ತಂಗಾ ಅವರು, ಕರ್ನಾಟಕದ ಹೆಮ್ಮೆಯ ಪುತ್ರ, ವಿಶ್ವವಿಖ್ಯಾತ ಎಂಜಿನಿಯರ್‌ ಸರ್‌.ಎಂ.ವಿ. ಅವರ ಸಮಾಧಿ ಸ್ಥಳದ ಬಗ್ಗೆ ಸರಕಾರ ತಳೆದಿರುವ ನಿರ್ಲಕ್ಷ್ಯದ ಬಗ್ಗೆ ವಿವರಿಸಿದಾಗ ಸಭೆಯಲ್ಲಿ ಗಂಭೀರ ಮೌನ.

ವಿಶ್ವೇಶ್ವರಯ್ಯನವರ ಸಮಾಧಿ ಸ್ಥಳ ಗಲೀಜಿನ ಆಗರವಾಗಿದೆ. ಆವರಣವೆಲ್ಲಾ ಕಸದ ರಾಶಿಯಿಂದ ಕೂಡಿದೆ. ಅಲ್ಲಿ ಪಶು ಸಂಗೋಪನಾ ಇಲಾಖೆಯ ಉಪಕರಣಗಳನ್ನು ರಾಶಿ ಹಾಕಲಾಗಿದೆ. ಹಸುಗಳಿಗೆ ಕೃತಕ ಗರ್ಭಧಾರಣೆಯ ಕೆಲಸವೂ ಈ ಸಮಾಧಿ ಸ್ಥಳದಲ್ಲಿಯೇ ನಡೆಯುತ್ತಿದೆ, ಇದು ಭಾರತ ರತ್ನ ಗೌರವಕ್ಕೆ ಪಾತ್ರರಾದ ಮಹಾನ್‌ ವ್ಯಕ್ತಿಗೆ ಮಾಡುತ್ತಿರುವ ಅವಮಾನ ಎಂದು ವಿವರಿಸಿದರು.

ವಿಶ್ವೇಶ್ವರಯ್ಯನವರು ಭಾರತದ ಹೆಮ್ಮೆಯ ಪುತ್ರ. ಅವರು ಬಳಸುತ್ತಿದ್ದ ವಸ್ತುಗಳನ್ನು ಕಣ್ಣಾರೆ ಕಾಣುವುದೇ ಸೌಭಾಗ್ಯ ಎಂದು ತಿಳಿದವರಿದ್ದಾರೆ. ಆದರೆ, ಸಮಾಧಿಯ ಬಳಿಯೇ ಇರುವ ವಿಶ್ವೇಶ್ವರಯ್ಯನವರ ವಸ್ತು ಸಂಗ್ರಹಾಲಯ ಅವರ ಕುಟುಂಬದವರ ವಶದಲ್ಲಿದೆ. ಈ ವಸ್ತು ಸಂಗ್ರಹಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಕೇವಲ ವಿವಿಐಪಿಗಳಿಗೆ ಮಾತ್ರ ಅವಕಾಶ ಎಂದು ಈ ಸಂದರ್ಭದಲ್ಲಿ ಬಿಜೆಪಿಯ ಡಾ. ಶಿವಯೋಗಿ ಸ್ವಾಮಿ ಆರೋಪಿಸಿದರು.

ವಿಶ್ವೇಶ್ವರಯ್ಯನವರ ಸಮಾಧಿ ಸ್ಥಳದ ಶೋಚನೀಯ ಸ್ಥಿತಿಗೆ ಇಡೀ ಸದನವೇ ವಿಷಾದ ವ್ಯಕ್ತಪಡಿಸಿದಾಗ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಅವರು ವಿವರ ನೀಡಿ. ಸಮಾಧಿ ಇರುವ ನಾಲ್ಕೂವರೆ ಎಕರೆ ಪ್ರದೇಶ ತೋಟಗಾರಿಕೆ ಇಲಾಖೆಯ ವಶದಲ್ಲಿದೆ. ಇದು ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ವಿಶ್ವೇಶ್ವರಯ್ಯನವರ ಸಮಾಧಿ ಸ್ಥಳವನ್ನು ಶುಚಿಯಾಗಿಡುವಂತೆ ಕೋರಲಾಗುವುದು ಎಂದು ಭರವಸೆ ನೀಡಿದರು.

ವಾರ್ತಾ ಸಂಚಯ
ಮುಖಪುಟ / ವಿಧಾನ ಮಂಡಲ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+