ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ತಿವಾರಿ ಆಯ್ಕೆ
ಬೆಂಗಳೂರು : ನವೆಂಬರ್ 15ರಿಂದ 17ರವರೆಗೆ ರಾಯಚೂರಿನಲ್ಲಿ ನಡೆಯಲಿರುವ 6ನೇ ಅಖಿಲ ಭಾರತ ರಾಷ್ಟ್ರೀಯ ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಸೊಲ್ಲಾಪುರದ ಹಿಂದಿ ಪ್ರಾಧ್ಯಾಪಕ ಡಾ.ಭಗವಾನ್ದಾಸ್ ತಿವಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಶರಣ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡೇತರ ಭಾಷೆಯ ವಿದ್ವಾಂಸರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ಇದೇ ಮೊದಲು. ಸೊಲ್ಲಾಪುರದ ಬಸವ ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಅಖಿಲ ಭಾರತ ಮರಾಠಿ ವೀರಶೈವ ಸಾಹಿತ್ಯ ಮಂಡಲಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ದಾಸ್ ಬಹುಭಾಷಾ ಲೇಖಕರಾಗಿ ಗುರ್ತಿಸಿಕೊಂಡಿದ್ದಾರೆ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮಾಧ್ಯಮಗಳಿಗೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Friday, November 10, 2000, 5:30 [IST]