ಚಿಕ್ಕಪೇಟೆಯ 1ನೇ ಇಯತ್ತೆ ಹುಡುಗನ ಅಪಹರಣ, 15 ಲಕ್ಷ ಬೇಡಿಕೆಮೂರ್ನಾಲ್ಕು ತಿಂಗಳುಗಳಲ್ಲಿ ಬೆಂಗಳೂರಲ್ಲಿ ನಡೆದಿರುವ 4ನೇ ಅಪಹರಣ
ಬೆಂಗಳೂರು : ನಗರದ ಪಾಲಿಗೆ ಅಕ್ಟೋಬರ್ ತಿಂಗಳು ವೃದ್ಧರ ಕೊಲೆಗಳ ಹಾಗೂ ಅಪಹರಣಗಳ ಮಾಹೆಯಾಗಿತ್ತು. ಕೆಲ ಅಪಹರಣ ಪ್ರಕರಣಗಳಲ್ಲಿ ಒತ್ತೆಯಾಳುಗಳನ್ನು ಬಿಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರೂ, ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿಲ್ಲ. ವಿವೇಕ ನಗರದ 6 ವರ್ಷದ ಮಗು ದೀಪಕ್ನನ್ನು ಅಪಹರಿಸಿದ ಒತ್ತೆಯಾಳುಗಳು ಕೇಳಿದ್ದ ಹಣ ಕೊಡಲಿಲ್ಲವೆಂದು ಕೊಂದು ಬಿಸುಟ ಸುದ್ದಿ ಮನದಲ್ಲಿ ಹಸುರಾಗಿರುವಾಗಲೇ ಚಿಕ್ಕಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1ನೇ ಇಯತ್ತೆಯ ಮತ್ತೊಬ್ಬ ಹುಡುಗನ ಅಪಹರಣವಾಗಿದೆ. ಈತನ ತಲೆಗೆ ಕಟ್ಟುತ್ತಿರುವ ಬೆಲೆ 15 ಲಕ್ಷ ರುಪಾಯಿ.
ಹುಡುಗನ ಹೆಸರು ರಾಘವೇಂದ್ರ. ಉದಯ ಶಾಲೆಯ ವಿದ್ಯಾರ್ಥಿ. ಸೋಮವಾರ ಬೆಳಗ್ಗೆಯಿಂದ ನಾಪತ್ತೆ. ಈತನ ತಂದೆ ನೇಕಾರ ಹೇಮರಾಜು ಗುರುವಾರ ಪೊಲೀಸರಿಗೆ ಈ ಕುರಿತು ದೂರು ಕೊಟ್ಟಿದ್ದಾರೆ. ಚಿಕ್ಕಪೇಟೆ ಎಸಿಪಿ ಜಿ.ಎ.ಬಾವ ಹಾಗೂ ಇನ್ಸ್ಪೆಕ್ಟರ್ ಬಿ.ಬಿ.ಅಶೋಕ್ ಕುಮಾರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಅಲಸೂರಿನ ಮದ್ಯ ವ್ಯಾಪಾರಿ ಬಾಬುರಾವ್ ಎಂಬುವರನ್ನು ಅಪಹರಿಸಿ, ಆತನ ಕುಟುಂಬದವರಿಂದ 5 ಲಕ್ಷ ರುಪಾಯಿ ಕೇಳಲಾಗಿತ್ತು. ರಾವ್ ಜೊತೆಗೆ ಹಣಕಾಸಿನ ವಿಷಯದಲ್ಲಿ ಜಗಳ ಆಡಿದ್ದ ಸೈಮನ್ ಎಂಬ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ತಕ್ಷಣ ರಾವ್ ಬಿಡುಗಡೆಯಾಗಿತ್ತು. ಆದರೆ ಅಪಹರಣಕಾರರನ್ನು ಇನ್ನೂ ಬಂಧಿಸಬೇಕಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ನಮಸ್ತೆ ಗಾರ್ಮೆಂಟ್ಸ್ನ ಅಧ್ಯಕ್ಷ ನಾರಾಯಣ್ ಭಟ್ ಅವರನ್ನೂ ಅಪಹರಿಸಲಾಗಿತ್ತು. ಈ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಇನ್ನಷ್ಟು ವಾರಗಳ ಹಿಂದಿನ ಉದಾಹರಣೆಯೆಂದರೆ ಹೊಟೇಲ್ ಉದ್ಯಮಿ ವೆಂಕಟೇಶ್ ಎಂಬುವರನ್ನು ಆಟೋವೊಂದರಲ್ಲಿ ಒತ್ತೆಯಾಗಿಟ್ಟುಕೊಂಡು ನಗರವನ್ನು ಸುತ್ತುತ್ತಿದ್ದ ಅಪಹರಣಕಾರರನ್ನು ಪೊಲೀಸರು ಬಂಧಿಸಿರುವುದು. ಅದಕ್ಕೂ ಹಿಂದೆ ಜಯನಗರ ನಿವಾಸಿ ಗಂಧದ ಮರದ ಕುಶಲ ಕರ್ಮಿಯಾಬ್ಬರ 5 ವರ್ಷದ ಮಗ ಸಯ್ಯಮ ಎಂಬುವನನ್ನು ಆತನ ಮನೆಯಿಂದ ಅಪಹರಿಸಿ, ಕೊಂದುಹಾಕಲಾಗಿತ್ತು.
ಆರು ತಿಂಗಳ ಹಿಂದೆ ಆಟೊಮೊಬೈಲ್ ಉದ್ಯಮಿ ಪುತ್ರ ವಿನೀತ್ ವಾಚಾನಿ ಪ್ರಕರಣದಿಂದ ಬೆಂಗಳೂರಿನಲ್ಲಿ ಮತ್ತೆ ಹೆಚ್ಚಿರುವ ಅಪಹರಣ ಪ್ರಕರಣಗಳನ್ನು ಸಂಪೂರ್ಣವಾಗಿ ಬೇಧಿಸಲು ಪೊಲೀಸರು ಇನ್ನೂ ಯಶಸ್ವಿಯಾಗಿಲ್ಲ. 1997ರಲ್ಲಿ ವ್ಯಾಪಾರಿ ಎನ್.ಕೆ.ಜಯ್ಪುರಿಯ ಎಂಬುವರ ಅಪಹರಣ ಪ್ರಕರಣವನ್ನು ಸಂಪೂರ್ಣ ಯಶಸ್ವಿಯಾಗಿ ಬೇಧಿಸಿದ್ದ ಬೆಂಗಳೂರು ಪೊಲೀಸರಿಗೆ ಪರೀಕ್ಷೆಯ ಮೇಲೆ ಪರೀಕ್ಷೆ ಬಂದೆರಗುತ್ತಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications