Get Updates
Get notified of breaking news, exclusive insights, and must-see stories!

ಅಬ್ದುಲ್‌ ಕರೀಂ ಅವರಿಗೆ ಜಯ, ರಾಜ್ಯ ಸರಕಾರಕ್ಕೆ ಮುಖಭಂಗ

supreme court judgementನವದೆಹಲಿ : ಟಾಡಾ ಬಂದಿಗಳ ಬಿಡುಗಡೆಯನ್ನು ವಿರೋಧಿಸಿ ನಿವೃತ್ತ ಪೊಲೀಸ್‌ ಅಧಿಕಾರಿ ಅಬ್ದುಲ್‌ ಕರೀಂ ಅವರು ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದಿರುವ ಸುಪ್ರಿಂ ಕೋರ್ಟ್‌, ಟಾಡಾ ಬಂದಿಗಳ ಬಿಡುಗಡೆಗೆ ಅನುಮತಿ ನಿರಾಕರಿಸಿದೆ.

ಟಾಡಾ ಬಂದಿಗಳ ಬಿಡುಗಡೆಗೆ ಹಸಿರು ನಿಶಾನೆ ತೋರಿರುವ ಚೆನ್ನೈ ಮತ್ತು ಮೈಸೂರು ನ್ಯಾಯಾಲಯಗಳ ತೀರ್ಮಾನವು ಕಾನೂನು ಸಮ್ಮತವಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರಿಂಕೋರ್ಟ್‌, ಅಪರಾಧ ಪ್ರಕ್ರಿಯಾ ಸಂಹಿತೆಯ 321 ನೇ ಕಲಮಿನ ಪ್ರಕಾರ, ಟಾಡಾ ಬಂದಿಗಳ ಬಿಡುಗಡೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಎಸ್‌.ಪಿ. ಭರೂಚ, ಡಿ.ಪಿ. ಮೊಹಾಪಾತ್ರ ಹಾಗೂ ವೈ.ಕೆ. ಸಬರ್‌ವಾಲ್‌ ಅವರಿದ್ದ ತ್ರಿಸದಸ್ಯರ ನ್ಯಾಯಪೀಠ ಮಂಗಳವಾರ ಈ ತೀರ್ಮಾನ ನೀಡಿದೆ.

ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ಕಾನೂನು ಸಚಿವರು ಸಲ್ಲಿಸಿರುವ ಪ್ರಮಾಣಪತ್ರಗಳನ್ನು ಅಸಂಬದ್ಧ ಎಂದು ಟೀಕಿಸಿರುವ ನ್ಯಾಯಪೀಠ, ಟಾಡಾ ಬಂದಿಗಳ ಬಿಡುಗಡೆ ಬದಲಿಗೆ ವೀರಪ್ಪನ್‌ ರಾಜ್‌ಕುಮಾರ್‌ ಅವರನ್ನು ಬಿಡುಗಡೆ ಮಾಡುವ ಕುರಿತಂತೆ ಯಾವುದೇ ಸಮರ್ಥನೆಗಳನ್ನು ರಾಜ್ಯ ಸರ್ಕಾರಗಳು ಒದಗಿಸಿಲ್ಲ ಎಂದಿದೆ.

10 ವರ್ಷಗಳಿಂದ ಕಾಡುಗಳ್ಳನನ್ನು ಬಂಧಿಸುವಲ್ಲಿ ವಿಫಲವಾಗಿರುವ ಉಭಯ ರಾಜ್ಯ ಸರ್ಕಾರಗಳು, ಟಾಡಾ ಬಂಧಿಗಳ ಬಿಡುಗಡೆಗೆ ತೋರುತ್ತಿರುವ ಆಸಕ್ತಿ ಗುಮಾನಿ ಹುಟ್ಟಿಸಿದೆ ಎಂದು ತೀರ್ಪಿನಲ್ಲಿ ನ್ಯಾಯಪೀಠ ಹೇಳಿದೆ. ಕಾನೂನಿನ ಆಗತ್ಯಗಳನ್ನು ಅನುಸರಿಸದೆ ಕೇವಲ ಸರ್ಕಾರಗಳ ಸೂಚನೆಗಳನ್ನು ಮಾತ್ರ ಅನುಸರಿಸಿದ ಕರ್ನಾಟಕದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರ ನಡಾವಳಿಯ ಬಗೆಗೂ ನ್ಯಾಯಪೀಠ ತನ್ನ ಅಸಮಾಧಾನ ವ್ಯಕ್ತ ಪಡಿಸಿದೆ. ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಸುಪ್ರಿಂಕೋರ್ಟ್‌ ತೀರ್ಪು ನೀಡುವ ಸಂದರ್ಭದಲ್ಲಿ ಕರ್ನಾಟಕದ ಅಡ್ವೋಕೇಟ್‌ ಜನರಲ್‌ ಅವರು ಮಂಗಳವಾರ ಗೈರು ಹಾಜರಾದದ್ದು ಎದ್ದು ಕಾಣುತ್ತಿತ್ತು .

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+