ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡದ ಕೈವಲ್ಯಗೆ ಬಿರ್ಲಾ ಸಂಗೀ-ತ ಪ್ರಶಸ್ತಿ

By Staff
|
Google Oneindia Kannada News

ಧಾರವಾಡ : ಹಿಂದೂಸ್ಥಾನಿ ಗಾಯಕ ಕೈವಲ್ಯ ಕುಮಾರ್‌ ಗೌರವ್‌ ಅವರು ಈ ಸಾಲಿನ ಆದಿತ್ಯ ವಿಕ್ರಮ್‌ ಬಿರ್ಲಾ ಕಲಾ ಕಿರಣ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಮುಂಬಯಿಯ ಸಂಗೀತ ಕಲಾ ಕೇಂದ್ರ ನೀಡುವ ಈ ಪ್ರಶಸ್ತಿಯು 35 ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿರುತ್ತದೆ. ಮಹಾರಾಷ್ಟ್ರದ ರಾಜ್ಯಪಾಲ ಡಾ. ಪಿ.ಸಿ. ಅಲೆಕ್ಸಾಂಡರ್‌ ನವೆಂಬರ್‌ 11ರ ಶನಿವಾರ ಮುಂಬಯಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕಲಾ ಕೇಂದ್ರದ ಲಲಿತ್‌ ದಗಾ ಹೇಳಿದ್ದಾರೆ.

ಸಂಗಮೇಶ್‌ ಗೌರವ್‌ ಅವರ ಪುತ್ರ , 37 ವರ್ಷ ವಯಸ್ಸಿನ ಕೈವಲ್ಯ ಕುಮಾರ್‌ ಹಿಂದೂಸ್ಥಾನಿಯ ಕಿರಾನ ಘರಾನ ಪ್ರಕಾರದಲ್ಲಿ ಪ್ರಸಿದ್ಧರಾಗಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X