ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧಾರವಾಡದ ಕೈವಲ್ಯಗೆ ಬಿರ್ಲಾ ಸಂಗೀ-ತ ಪ್ರಶಸ್ತಿ
ಧಾರವಾಡ : ಹಿಂದೂಸ್ಥಾನಿ ಗಾಯಕ ಕೈವಲ್ಯ ಕುಮಾರ್ ಗೌರವ್ ಅವರು ಈ ಸಾಲಿನ ಆದಿತ್ಯ ವಿಕ್ರಮ್ ಬಿರ್ಲಾ ಕಲಾ ಕಿರಣ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಮುಂಬಯಿಯ ಸಂಗೀತ ಕಲಾ ಕೇಂದ್ರ ನೀಡುವ ಈ ಪ್ರಶಸ್ತಿಯು 35 ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿರುತ್ತದೆ. ಮಹಾರಾಷ್ಟ್ರದ ರಾಜ್ಯಪಾಲ ಡಾ. ಪಿ.ಸಿ. ಅಲೆಕ್ಸಾಂಡರ್ ನವೆಂಬರ್ 11ರ ಶನಿವಾರ ಮುಂಬಯಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕಲಾ ಕೇಂದ್ರದ ಲಲಿತ್ ದಗಾ ಹೇಳಿದ್ದಾರೆ.
ಸಂಗಮೇಶ್ ಗೌರವ್ ಅವರ ಪುತ್ರ , 37 ವರ್ಷ ವಯಸ್ಸಿನ ಕೈವಲ್ಯ ಕುಮಾರ್ ಹಿಂದೂಸ್ಥಾನಿಯ ಕಿರಾನ ಘರಾನ ಪ್ರಕಾರದಲ್ಲಿ ಪ್ರಸಿದ್ಧರಾಗಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Tuesday, November 7, 2000, 5:30 [IST]