ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಳ್ಳ ಸಾಗಣೆಯಾಗಲಿದ್ದ 256 ಟನ್ ಶ್ರೀಗಂಧ ವಶ : ರಂಗನಾಥ್
ಬೆಂಗಳೂರು : ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಿಂದ ಹೊರ ರಾಜ್ಯಗಳಿಗೆ ಕಳ್ಳಸಾಗಣೆ ಆಗಲಿದ್ದ ಸುಮಾರು 256 ಟನ್ಗಳಷ್ಟು ಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಷಯವನ್ನು ರಾಜ್ಯ ಅರಣ್ಯ ಖಾತೆ ಸಚಿವ ಕೆ.ಎಚ್. ರಂಗನಾಥ್ ಮಂಗಳವಾರ ವಿಧಾನ ಪರಿಷತ್ತಿಗೆ ತಿಳಿಸಿದರು.
ಈ ಸಂಬಂಧ ಒಟ್ಟು 1923 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಆ ಪೈಕಿ 606 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಅವರು, ಜನತಾದಳದ ಶಾಸಕ ಬಿ.ಎಲ್. ಶಂಕರ್ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದರು.
ಈ ರೀತಿ ವಶಪಡಿಸಿಕೊಳ್ಳಲಾದ ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡುವ ವಿಧಿ ವಿಧಾನಗಳನ್ನು ಸರಳಗೊಳಿಸುವ ಬಗ್ಗೆ ಸರಕಾರ ಚಿಂತಿಸುತ್ತಿದೆ ಎಂದೂ ಹೇಳಿದರು. (ಯುಎನ್ಐ)
Comments
Story first published: Tuesday, November 7, 2000, 5:30 [IST]