ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಬ್ಬೂರು ಕ್ರಾಸ್‌ ಬಳಿ ಲಕ್ಷುರಿ ಬಸ್‌ಗೆ ಬೆಂಕಿ: ಇಬ್ಬರ ಸಜೀವ ದಹನ

By Staff
|
Google Oneindia Kannada News

ಹುಬ್ಬಳ್ಳಿ : ಇಲ್ಲಿಗೆ ಸಮೀಪದ ಗಬ್ಬೂರು ಕ್ರಾಸ್‌ ಬಳಿ ಮಂಗಳವಾರ ಮುಂಜಾನೆ ಲಕ್ಷುರಿ ಬಸ್ಸೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರ ಸಜೀವ ದಹನವಾಗಿದ್ದು, 8 ಮಂದಿಗೆ ಸುಟ್ಟ ಗಾಯಗಳಾಗಿವೆ.

ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ , ಟ್ರಿಸೂರ್‌ ಕಡೆಗೆ ಹೋಗುತ್ತಿದ್ದ ಕೇರಳದ ಅಕ್ಬರ್‌ ಟ್ರಾವಲ್ಸ್‌ನ ಈ ಬಸ್ಸಿನಲ್ಲಿ ಡೀಸೆಲ್‌ ಸೋರಿದ ಪರಿಣಾಮ ಬೆಂಕಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಸಂಸ್ಥೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ ಎಂದು ಪೊಲೀಸ್‌ ಉಪ ಆಯುಕ್ತ ಸುರೇಶ್‌ ತಿಳಿಸಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X