ಬೆಂಗಳೂರಲ್ಲಿ ಹೆಚ್ಚುತ್ತಿರುವ ಅಪರಾಧ:ಅಕ್ಟೋಬರ್ನಲ್ಲಿ 27 ಕೊಲೆ
*ಎಂ.ಕೆ. ಮಧು ಸೂದನ್
ಬೆಂಗಳೂರು : ಬೆಳವಣಿಗೆಯ ರಭಸದಲ್ಲಿ ಹಲವಾರು ಖ್ಯಾತಿಯ ಪುಚ್ಛಗಳನ್ನು ತನ್ನ ಟೊಪ್ಪಿಗೆ ಸಿಕ್ಕಿಸಿಕೊಂಡಿರುವ ಭಾರತದ ಸಿಲಿಕಾನ್ ವ್ಯಾಲಿ, ಅಪರಾಧ ದಾಖಲೆಗಳಲ್ಲೂ ಮುಂದಿದೆ. ಸರಿ ಸುಮಾರು ದಿನಕ್ಕೊಂದರಂತೆ ನಗರದಲ್ಲಿ ಕೊಲೆಗಳು ಸಂಭವಿಸುತ್ತಿವೆ. ಲೆಕ್ಕ ಹಿಡಿದು ಹೇಳುವುದಾದರೆ, ಅಕ್ಟೋಬರ್ ತಿಂಗಳಲ್ಲಿ 27 ಕೊಲೆಗಳ ಪಟ್ಟಿ ಸಿಕ್ಕುತ್ತದೆ.
ಪತ್ರಿಕೆಯಲ್ಲಿ ವರದಿಯಾಗುವ ಕೊಲೆಯ ಸುದ್ದಿಗಳನ್ನು ನೋಡಿದರೆ, ರಸ್ತೆಯಲ್ಲಿ ಓಡಾಡಲೇ ದಿಗಿಲಾಗುತ್ತದೆ. ನಮ್ಮಂತ ವೃದ್ಧರಿಗಂತೂ ಓಡಾಟ ಸಾಕು ಸಾಕನ್ನಿಸುತ್ತದೆ ಎನ್ನುತ್ತಾರೆ ನಿವೃತ್ತ ಅಧಿಕಾರಿ 71 ವರ್ಷ ವಯಸ್ಸಿನ ಹನುಮಂತ ರಾವ್. ಅಕ್ಟೋಬರ್ನಲ್ಲಿ ವರದಿಯಾಗಿರುವ ಕೊಲೆಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚಿರುವುದರ ಹಿನ್ನೆಲೆಯಲ್ಲಿ ಅವರ ಆತಂಕ ವಿಶೇಷ ಅರ್ಥ ಪಡೆದುಕೊಳ್ಳುತ್ತದೆ.
ವರದಿಯಾಗಿರುವ ಬಹಳಷ್ಟು ಕೊಲೆಗಳು, ಕುಟುಂಬ ಕಲಹಗಳಲ್ಲಿ ಹಾಗೂ ನೆರೆಯವರೊಂದಿಗಿನ ಜಗಳಗಳಲ್ಲಿ ಸಂಭವಿಸಿವೆ ಎಂದು ಪೊಲೀಸರು ಹೇಳುತ್ತಾರೆ. ನಗರದ ವ್ಯಾಪ್ತಿಯಲ್ಲಿ ವರದಿಯಾಗಿರುವ 27 ಕೊಲೆಗಳಲ್ಲಿ 12 ಕೊಲೆಗಳು ರಕ್ತ ಸಂಬಂಧಿಗಳಲ್ಲಿ ಸಂಭವಿಸಿದ್ದರೆ, 7 ಕೊಲೆಗಳು ನೆರೆಹೊರೆಯವರ ಕಲಹಗಳಲ್ಲಿ ಸಂಭವಿಸಿವೆ. 2 ಶವಗಳನ್ನು ಈವರೆಗೆ ಗುರ್ತಿಸಲಾಗಿಲ್ಲ , ಉಳಿದಂತೆ 5 ಕೊಲೆಗಳು ಮಾತ್ರ ಅಪರಾಧ ಜಗತ್ತಿನ ಜನರಿಂದ ಸಂಭವಿಸಿವೆ ಎಂದು ನಗರ ಪೊಲೀಸ್ ಕಮೀಷನರ್ ಟಿ.ಮಡಿಯಾಳ್ ಹೇಳಿದ್ದಾರೆ.
ಒಂದೇ ತಿಂಗಳಲ್ಲಿ ಇಷ್ಟೊಂದು ಕೊಲೆಗಳಾಗಿರುವುದು ಸಹಜವಾಗಿಯೇ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಾವು ಜನರಲ್ಲಿ ಸುರಕ್ಷತೆಯ ಬಗ್ಗೆ ನಂಬಿಕೆ ತುಂಬುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಮಡಿಯಾಳ್ ಹೇಳುತ್ತಾರೆ.
ದೀಪಕ್ನ ಸಾವಿನೊಂದಿಗೆ ಪ್ರಾರಂಭವಾದ ಅಪರಾಧ ಮಾಸ
ಅಕ್ಟೋಬರ್ ತಿಂಗಳು ಪ್ರಾರಂಭವಾದದ್ದೇ ಏಳು ವರ್ಷದ ಬಾಲಕ ವಿವೇಕನಗರದ ದೀಪಕ್ನ ಅಪಹರಣದಿಂದ. ಅಪಹೃತರು ಕೇಳಿದ 4.5 ಲಕ್ಷ ರುಪಾಯಿ ಒತ್ತೆ ಹಣ ಸಲ್ಲಿಸುವಲ್ಲಿ ವಿಫಲವಾದ ಪೋಷಕರಿಗೆ ಮರುದಿನ ಸಿಕ್ಕಿದ್ದು ದೀಪಕನ ಮೃತದೇಹ, ಸನಿಹದ ಲೇಕ್ ಬಳಿ. ಪೊಲೀಸರು ಅಪರಾಧಿಗಳನ್ನು ಇನ್ನೂ ಹುಡುಕುತ್ತಿದ್ದಾರೆ.
ಮತ್ತೊಂದು ಘಟನೆ 72 ವರ್ಷ ವಯಸ್ಸಿನ ನಿವೃತ್ತ ಅಧಿಕಾರಿ ಅವರದು. ಕುತ್ತಿಗೆ ಕೊಯ್ದು ಅವರ ನಿವಾಸದಲ್ಲೇ ಅವರನ್ನು ಕೊಲೆ ಮಾಡಲಾಗಿತ್ತು . ಸರಿಯಾಗಿ 10 ದಿನಗಳ ನಂತರ 65 ವರ್ಷದ ವೃದ್ಧೆಯಾಬ್ಬರ ಕೊಲೆಯ ವರದಿಯಾಯಿತು. ಅಕ್ಟೋಬರ್ 31 ರಂದು, 60 ವರ್ಷದ ವೃದ್ಧೆಯಾಬ್ಬಳ ಸಾವಿನ ಪ್ರಕರಣ ಹಾಗೂ ನಿವೃತ್ತ ನೌಕರರೊಬ್ಬರ ಕೊಲೆ (ಮನೆಯಲ್ಲಿನ ಗ್ಯಾರೇಜ್ನಲ್ಲಿ ) ವರದಿಯಾದವು.
ಮಡಿಯಾಳ್ರ ಪ್ರಕಾರ, ಪ್ರತಿವರ್ಷ 200 ಕೊಲೆಗಳಿಗೆ ನಗರ ಸಾಕ್ಷಿಯಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ನಡೆದ ಕೊಲೆಗಳಲ್ಲಿ ಎರಡು ವೃತ್ತಿಪರ ಕಟುಕರಿಂದ ನಡೆದಿವೆ. ಮೊದಲನೆಯದು ಅಪಹರಣ ಪ್ರಕರಣದಲ್ಲಿ ಜೀವ ತೆತ್ತ ಬಾಲಕ ದೀಪಕ್. ಮತ್ತೊಂದು ತನ್ನ ಎದುರಾಳಿಗಳಿಂದ ಹತನಾದ ದುಷ್ಕರ್ಮಿ ಸುರೇಶ್ಗೌಡನದು. ಅನೇಕ ಅಪರಾಧ ಪ್ರಕರಣಗಳು ಸುರೇಶ್ ಗೌಡನ ವಿರುದ್ಧ ದಾಖಲಾಗಿದ್ದವು.
ಹಿರಿಯ ನಾಗರಿಕರೆ ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳನ್ನು ಗುರ್ತಿಸಿ ರಕ್ಷಣೆ ನೀಡಲಾಗುವುದು. ಪೊಲೀಸ್ ಗಸ್ತನ್ನು ಚುರುಕುಗೊಳಿಸಲಾಗುವುದು. ಸಾರ್ವಜನಿಕರು ಆತಂಕಗೊಳ್ಳಲು ಆಸ್ಪದವಿಲ್ಲ ಎಂದು ಮಡಿಯಾಳ್ ಹೇಳಿದ್ದಾರೆ.
(ಐಎಎನ್ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications