ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲು ಮಾರಿ ಬದುಕುವವರನ್ನು ತೆರಿಗೆಯಿಂದ ಬಚಾವು ಮಾಡಿ

By Staff
|
Google Oneindia Kannada News

ಬೆಂಗಳೂರು : ಹಾಲು ಸರಬರಾಜಿನ ಮೂಲಕ ಸಹಕಾರಿ ಹಾಲು ಒಕ್ಕೂಟ ಹಾಗೂ ಪ್ರೆೃಮರ್‌ ಹಾಲು ಸಹಕಾರಿ ಸಂಸ್ಥೆಗಳು ಗಳಿಸುವ ಆದಾಯಕ್ಕೆ, ಆದಾಯ ತೆರಿಗೆ ಕಲಮು 80ಪಿ ಅನ್ವಯ, ತೆರಿಗೆ ವಿನಾಯಿತಿ ನೀಡುವಂತೆ ಕೇಂದ್ರ ಕೃಷಿ ಸಚಿವ ನಿತೀಶ್‌ ಕುಮಾರ್‌ ಅವರನ್ನು ರಾಜ್ಯ ಪಶು ಸಂಗೋಪನಾ ಸಚಿವ ಎಸ್‌. ಕೃಷ್ಣಪ್ಪ ಕೋರಿದ್ದಾರೆ.

ಕೃಷಿಗೆ ಸಂಬಂಧಿಸಿದ ಸಂಸದೀಯ ನಿಯೋಗದ ನೇತೃತ್ವ ವಹಿಸಿ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಸಚಿವರನ್ನು ಭೆಟ್ಟಿಯಾದ ಕೃಷ್ಣಪ್ಪ ಅವರು ಮನವಿ ಅರ್ಪಿಸಿದ್ದಾರೆ. ಮನವಿ ಪತ್ರ ಸಲ್ಲಿಸುವಾಗ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌)ದ ಅಧ್ಯಕ್ಷ ಎಚ್‌. ರೇವಣ್ಣ ಅವರು ಸಚಿವರೊಂದಿಗಿದ್ದರು.

ಜಾನುವಾರುಗಳ ಮೇವು ಉತ್ಪಾದನಾ ಕೇಂದ್ರಗಳಿಗೆ ಆವರ್ತ ನಿಧಿಯನ್ನು ಆರಂಭಿಸುವಂತೆ ಕೇಂದ್ರವನ್ನು ಕೋರಿರುವುದಾಗಿ ಕೆಎಂಎಫ್‌ನ ಪ್ರಕಟಣೆ ತಿಳಿಸಿದೆ. ಡೈರಿಯ ಆರ್ಥಿಕ ವಲಯಕ್ಕೆ ಸಂಬಂಧಿಸಿದಂತೆ ಹಾಲು ಒಕ್ಕೂಟ ಮತ್ತು ಯೂನಿಯನ್‌ಗಳಲ್ಲಿ ಸ್ವಯಂ ನಿವೃತ್ತಿ ಯೋಜನೆಯ ಅನುಷ್ಠಾನಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆಯೂ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X