ಭಾರತಕ್ಕೆ 32 ಬಿಲಿಯನ್ ವೆಂಚರ್ ಕ್ಯಾಪಿಟಲ್ ಪ್ರವಾಹ
*ದೀಪ್ಷಿಖಾ ಘೋಷ್
ನವದೆಹಲಿ : ವೆಂಚರ್ ಕ್ಯಾಪಿಟಲ್ ನಿರೀಕ್ಷೆಯಲ್ಲಿರುವ ಭಾರತದ ಉದ್ಯಮಶೀಲರಿಗೆ ಗುಡ್ನ್ಯೂಸ್.
ಭಾರತಕ್ಕೆ ಹರಿದು ಬರುತ್ತಿರುವ ವೆಂಚರ್ ಕ್ಯಾಪಿಟಲ್ ಮತ್ತು ಖಾಸಗಿ ಷೇರು ಬಂಡವಾಳದ ಪ್ರಮಾಣ ಕಳೆದ ಒಂದು ವರ್ಷದಲ್ಲಿ ದ್ವಿಗುಣಗೊಂಡಿದೆ ಎಂದು ಸಾಫ್ಟ್ವೇರ್ ಕಂಪನಿ ಮತ್ತು ಸೇವೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಮ್) ಗುರುವಾರ ತಿಳಿಸಿದೆ.
ಬಂಡವಾಳ ಹರಿವಿನ ಪ್ರಮಾಣ 2000-2001ನೇ ಸಾಲಿನಲ್ಲಿ 32 ಬಿಲಿಯನ್ ರುಪಾಯಿ ಮುಟ್ಟಿದೆ ಎಂದು ಅಂಕಿ-ಅಂಶ ನೀಡಿರುವ ನಾಸ್ಕಾಮ್, ಈ ಸಂಬಂಧ ಕೆಲವು ನಿಯಮಗಳನ್ನು ಸಡಿಲಗೊಳಿಸಿರುವ ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಅವರ ನಿರ್ಧಾರವನ್ನು ಸ್ವಾಗತಿಸಿದೆ. ಈಗಿ ಹೊಸ ನಿಯಮದ ಪ್ರಕಾರ ಕಂಪೆನಿ ಷೇರು ಮಾರುಕಟ್ಟೆ ಪ್ರವೇಶಿಸಿದ ನಂತರ 12 ತಿಂಗಳ ನಂತರ ಹೊರ ಹೋಗಬೇಕೆಂಬ ನಿಯಮ ಸಡಿಲಗೊಳಿಸಿ ಅವಧಿಯನ್ನು ಅನಿರ್ಧಿಷ್ಠಾವಧಿಗೆ ವಿಸ್ತರಿಸಲಾಗಿದೆ ಎಂದು ನಾಸ್ಕಾಮ್ ಅಧ್ಯಕ್ಷ ದೇವಾಂಗ್ ಮೆಹ್ತಾ ಹೇಳಿದ್ದಾರೆ.
ಬಹುತೇಕ ಕಂಪನಿಗಳಲ್ಲಿ ಕೇವಲ ಶೇಕಡಾ 10ರಿಂದ 25 ರಷ್ಟು ಷೇರು ಬಂಡವಾಳದ ವೆಂಚರ್ ಕ್ಯಾಪಿಟಲ್ ಅನ್ನು ಹೂಡಲಾಗಿದ್ದು ಅಂಥವರಿಗೆ ಹಿಂದಿನ ನಿಯಮಗಳಿಂದ ತೊಂದರೆಯಾಗುತ್ತಿತ್ತು. ಇದರಿಂದ ಷೇರುಮಾರುಕಟ್ಟೆಯ ಮೇಲೆ ಪರಿಣಾಮ ಉಂಟಾಗುತ್ತಿತ್ತು ಈಗ ಆ ನಿರ್ಬಂಧಗಳಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಬಂಡವಾಳದ ಹರಿವಿನ ಪ್ರಮಾಣ ದ್ವಿಗುಣಗೊಳ್ಳುತ್ತಲೇ ಇರುತ್ತದೆ ಎಂದು ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ದ್ವಿಗುಣ : ಮುಂದಿನ ಆರ್ಥಿಕ ವರ್ಷದ ಹೊತ್ತಿಗೆ ವೆಂಚರ್ ಕ್ಯಾಪಿಟಲ್ 65 ಬಿಲಿಯನ್ ಮುಟ್ಟುವ ಸಾಧ್ಯತೆ ಇದೆ. ಕಠಿಣ ನಿಯಮಗಳಿಂದ ವೆಂಚರ್ ಕ್ಯಾಪಿಟಲ್ನ ಹರಿವು ಕಡಿಮೆಯಾಗುತ್ತಾ ಬಂದಿತ್ತು. ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನಗಳ ವಿಷಯದಲ್ಲಿ ಭಾರತ ಬಲಿಷ್ಠವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸಬಹುದು. ಈ ವರ್ಷ ಹೊಸದಾಗಿ 18 ವೆಂಚರ್ ಕ್ಯಾಪಿಟಲ್ ಫಂಡ್ಗಳು ದಾಖಲಾಗಿದ್ದು ಒಟ್ಟಾರೆ ಸಂಖ್ಯೆ 28ಕ್ಕೇರಿದೆ. 1996-20000 ಇಸವಿಯಾಳಗೆ ಶೇಕಡಾ 5000ದಷ್ಟು ಹೆಚ್ಚಾಗಿರುವ ವೆಂಚರ್ ಕ್ಯಾಪಿಟಲ್, 700ಮಿಲಿಯನ್ ರುಪಾಯಿಗಳಿಂದ 32ಬಿಲಿಯನ್ಗೆ ಏರಿದೆ ಎಂದು ಮೆಹ್ತಾ ತಿಳಿಸಿದ್ದಾರೆ.
ವೆಂಚರ್ ಕ್ಯಾಪಿಟಲ್ ಕ್ಲಿನಿಕ್ ಸಂಘಟಿಸಿದ್ದ ಎರಡು ದಿನಗಳ ಸಮಾವೇಶದಲ್ಲಿ ಪ್ರಮುಖ ವೆಂಚರ್ ಕ್ಯಾಪಿಟಲಿಸ್ಟಗಳಾದ ಟಿಐಇ ಅಧ್ಯಕ್ಷ ಕಾನ್ವಾಲ್ ರೇಖಿ, ಸುಹಾಸ್ ಪಾಟೀಲ್, ಪವನ್ ನಿಗಮ್ ಸೇರಿದಂತೆ 20 ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಭಾಗವಹಿಸಿದ್ದವು.
ಸಮಾವೇಶದಲ್ಲಿ 300 ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಹೆಸರು ನೊಂದಾಯಿಸಿದ್ದು ಇನ್ನೂ 2 ಬಿಲಿಯನ್ ಹಣ ಹರಿದು ಬರುವ ಸಾಧ್ಯತೆ ಇದೆ ಎಂದು ಸಮಾವೇಶದಲ್ಲಿ ತಿಳಿಸಲಾಗಿದೆ.
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications