ಏನು ಶಿಕ್ಷೆ ಕೊಡುವುದು? : ಶುಕ್ರವಾರ ಧಿಂಡ್ಸಾ - ಮುತ್ತಯ್ಯ ಚರ್ಚೆ
ನವದೆಹಲಿ : ಸಿಬಿಐ ತನ್ನ ವರದಿಯಲ್ಲಿ ಹೆಸರಿಸಿರುವ ಐವರು ಮೋಸದಾಟ ಆಡಿರುವ ಕ್ರಿಕೆಟಿಗರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದರ ಬಗೆಗೆ ಕ್ರೀಡಾ ಸಚಿವ ಎಸ್.ಎಸ್.ಧಿಂಡ್ಸಾ ತಲೆಕೆಡಿಸಿಕೊಳ್ಳುತ್ತಿದ್ದು, ಈ ಕುರಿತು ಬಿಸಿಸಿಐ ಅಧ್ಯಕ್ಷ ಎ.ಸಿ.ಮುತ್ತಯ್ಯ ಅವರ ಜೊತೆ ಶುಕ್ರವಾರ ಚರ್ಚಿಸಲಿದ್ದಾರೆ.
ವಿದೇಶೀ ಕ್ರಿಕೆಟಿಗರೂ ಸೇರಿದಂತೆ ಆರೋಪಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಕಾನೂನು ಸಚಿವಾಲಯ ಸೂಚಿಸಲಿದೆ. ಅಜರ್ ಮತ್ತು ಅಜಯ್ ಶರ್ಮ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವುದರಿಂದ ಅವರ ವಿರುದ್ಧ ಕ್ರಮ ಜರುಗಿಸಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಉಳಿದ ಯಾವ ಆಟಗಾರನ ಮೇಲೂ ಭ್ರಷ್ಟಾಚಾರದ ಮೊಕದ್ದಮೆ ಹೂಡಲು ಸಾಧ್ಯವಿಲ್ಲ. ಯಾವುದನ್ನೂ ಕಾನೂನು ಸಚಿವಾಲಯ ತೀರ್ಮಾನಿಸಲಿದೆ ಎಂದು ಧಿಂಡ್ಸಾ ತಿಳಿಸಿದ್ದಾರೆ.
ಐಸಿಸಿ ನಿಯೋಗ ಭಾರತಕ್ಕೆ : ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನ ತಂಡ ಲಂಡನ್ನಿನ ಮಾಜಿ ಪೊಲೀಸ್ ಮುಖ.್ಯಸ್ಥ ಪಾಲ್ ಕಾಂಡನ್ ನೇತೃತ್ವದಲ್ಲಿ ವಾರಾಂತ್ಯದಲ್ಲಿ ಭಾರತಕ್ಕೆ ಆಗಮಿಸಲಿದೆ. ಸಿಬಿಐನ ಮ್ಯಾಚ್ಫಿಕ್ಸಿಂಗ್ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಲಿದೆ. ವರದಿಯಲ್ಲಿ 9 ವಿದೇಶೀ ಕ್ರಿಕೆಟಿಗರ ಹೆಸರುಗಳೂ ಇರುವುದರಿಂದ ಐಸಿಸಿಯ ತನಿಖಾ ದಳ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
ನನಗೆ ಅಜರ್ ಬಗ್ಗೆ ಗುಮಾನಿ ಇತ್ತು - ಸಚಿನ್ : ನಾನು ನಾಯಕನಾಗಿದ್ದ ಅವಧಿಯಲ್ಲಿ ಅಜರ್ ಅನೇಕ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯಕ್ಕಿಂತ ಕಳಪೆ ಆಟ ಪ್ರದರ್ಶಿಸಿದ್ದರು. ಅವರು ಯಾವುದೋ ಕಮಿಟ್ಮಂಟ್ಗೆ ಒಳಪಟ್ಟಿರುವ ಬಗೆಗೆ ನನಗೆ ಅನುಮಾನಗಳಿದ್ದವು. 1994ರ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಪ್ರಭಾಕರ್ ಮತ್ತು ಮೊಂಗಿಯಾ ತೀರಾ ನಿಧಾನವಾಗಿ ಆಡಿದರು. ಮ್ಯಾನೇಜ್ಮೆಂಟ್ ಹಾಗೆ ಆಡುವಂತೆ ಹೇಳಿರುವುದಾಗಿ ಮೊಂಗಿಯಾ ತಮಗೆ ತಿಳಿಸಿದುದಾಗಿ ಪ್ರಭಾಕರ್ ಹೇಳಿದ್ದರು. ಆದರೆ ಮ್ಯಾನೇಜ್ಮೆಂಟ್ ಹಾಗೆ ಹೇಳೇ ಇರಲಿಲ್ಲ. ಸಚಿನ್ ಸಿಬಿಐ ವಿಚಾರಣೆ ವೇಳೆ ಹೇಳಿರುವ ಮಾತುಗಳಿವು.
ಆ ಕರಾಳ ರಾತ್ರಿಗಳು ವಾಪಸ್ಸು ಬಂದಾವೆ?- ಕಪಿಲ್ : ನನ್ನ ಹೆಸರು ಕೇಳಿದ್ದೇ ತಡ, ಮಾಧ್ಯಮದವರು ಯದ್ವಾತದ್ವಾ ಬರೆದು, ನನ್ನ ಮನಸ್ಸನ್ನು ಕಲಕಿದರು. ನಿದ್ರೆಯೇ ಇಲ್ಲದ ಎಷ್ಟೋ ಕರಾಳ ರಾತ್ರಿಗಳು ಮರಳಿ ಬಂದಾವೆ? ನಾನು ನಿರ್ದೋಷಿಯೆಂಬ ಸುದ್ದಿ ಅಮ್ಮನಿಗಂತೂ ಖುಷಿ ತಂದಿದೆ ಎಂದಿದ್ದಾರೆ ಕಪಿಲ್.
(ರಾಯ್ಟರ್ಸ್)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications