ಅರಳುವ ಮುನ್ನವೇ ಹರಿದ ಕನ್ನಡ ಬಾವುಟ!
ಮಂಗಳೂರು : ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹರಿದು ಹೋಗಿದ್ದರಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು, ಸಭಿಕರಿಗೆಲ್ಲರಿಗೂ ಇರಿಸು ಮುರುಸಾಗುವ ಪ್ರಸಂಗ ಬಂದಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಗಳು ಧ್ವಜಾರೋಹಣ ಮಾಡಲು ಧ್ವಜ ಸ್ಥಂಭದ ಬಳಿಗೆ ತೆರಳಿ ಧ್ವಜ ಅರಳಿಸಲು ಹಗ್ಗ ಕೊಡವಿದಾಗ, ಕನ್ನಡ ಧ್ವಜ ಅರಳದೇ ಪರ್ರನೆ ಹರಿದು ಹೋಯಿತು. ಇನ್ನೇನೂ ಮಾಡಲು ತೋಚದೆ ರೈಗಳು ಅದನ್ನು ಹಾಗೆಯೇ ಬಿಟ್ಟು ಗೌರವ ರಕ್ಷೆ ಸ್ವೀಕರಿಸಿ, ಪೆರೇಡ್ ವೀಕ್ಷಿಸಿದರು. ನಂತರ ಮಾತನಾಡಿದ ಅವರು ರಾಜ್ ಬಿಡುಗಡೆಗೆ ಸರಕಾರ ಸರ್ವ ಪ್ರಯತ್ನ ಮಾಡುತ್ತಿರುವುದಾಗಿ, ತಣ್ಣೀರು ಬಾವಿ ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರ ಮುಂದಿನ ವರ್ಷ ಕಾರ್ಯಾರಂಭಿಸಲಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಕಪಿಲ್ ಮೋಹನ್, ಪೊಲೀಸ್ ವರಿಷ್ಠ ಕಮಲ್ ಪಂತ್, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು, ಐಜಿಪಿ ಧರ್ಮಪಾಲ ನೇಗಿ ಭಾಗವಹಿಸಿದ್ದರು.
(-ಮಂ-ಗ-ಳೂ-ರು ಪ್ರ-ತಿ-ನಿ-ಧಿ-ಯಿಂ-ದ)