ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಸುಕು ತೆಗೆದ ಮಾಯಾಂಗನೆ !
ಇನ್ನೆರಡು ದಿನ ಬೆಂಗಳೂರಿನ ಆಕಾಶ ಶುಭ್ರವಾಗಿರುತ್ತದೆ ಅಂತ ಹವಾಮಾನ ಇಲಾಖೆಯವರು ಹೇಳಿದ್ದಾರೆ. ಶುಭ್ರ ಎಂದ-ರೆ ಮಾಲಿನ್ಯ ರಹಿತ ಅಂತೇನಲ್ಲ. ಮಳೆಯ ಮೋಡದ ಮಸುಕು ಇರುವುದಿಲ್ಲ ಅಷ್ಟೆ. ಸೀದಾ ನಡೆಯುತ್ತಿದ್ದರೆ ನಿಮ್ಮ ಬೆನ್ನು ಚುರುಗುಟ್ಟುವಷ್ಟು ಬಿಸಿಲು ಬೀಳುತ್ತದೆ.
ಹವಾಮಾನ ಇಲಾಖೆಯವರ ಭವಿಷ್ಯ ನೋಡಿದರೆ ಎಲ್ಲವೂ ಸುಖವಾಗಿಯೇ ಇದೆ. ಮಂಡ್ಯ,ದಾವಣಗೆರೆ, ತಿಪಟೂರಿನಲ್ಲಿ ಮಳೆಯ ಆರ್ಭಟದಿಂದ ಆಗಿರುವ ನಷ್ಟ ದ ಲೆಕ್ಕಾಚಾ-ರ ನಡೆ-ಯು-ತ್ತಿ-ದೆ. ಪರಿಹಾರ, ಮನವಿ ಪತ್ರ, ಶಿಫಾರಸುಗಳ ಕೆಲಸ ನಡೆಯುತ್ತಿದೆ.
ಇವೆಲ್ಲದರ ನಡುವೆ ಭಾನುವಾರದ ಗರಿಷ್ಠ ಉಷ್ಣಾಂಶ ಮತ್ತು ಕನಿಷ್ಠ ಉಷ್ಣಾ ಂಶಗಳೆರಡೂ ಗುಲ್ಬರ್ಗಾದಲ್ಲಿಯೇ ದಾಖಲಾಗಿದೆ (34.4 ಮತ್ತು 14 ). ಎಲ್ಲಿಯೂ ಮಳೆ ಸುರಿಯುವ ಹಾಗೆ ಕಾಣುವುದಿಲ್ಲವಂತೆ. ಒಣಹವೆಯೇ ರಾಜ್ಯದಲ್ಲೆಡೆ ಇರುತ್ತದೆ ಅಂತ ಇಲಾಖೆಯವರು ಹೇಳುತ್ತಾರೆ.
Comments
English summary
Karnataka weather today