ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮೂರಿಗೆ ಹೊಸದಾಗಿ ವರ್ಗವಾಗಿ ಬಂದ ಅಧಿಕಾರಿಗಳು

By Staff
|
Google Oneindia Kannada News

ಬೆಂಗಳೂರು : ರಾಜ್ಯ ಸರಕಾರ ಐಎಎಸ್‌ ಮತ್ತು ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಶುಕ್ರವಾರ ಹೊರಡಿಸಿದೆ.

ಮೈಸೂರು ವಿಭಾಗಾಧಿಕಾರಿಯಾಗಿ ಎಚ್‌. ಭಾಸ್ಕರ್‌, ಬೆಂಗಳೂರಿನ ಕೃಷಿ ಮಾರುಕಟ್ಟೆ ನಿರ್ದೇಶಕರಾಗಿ ಡಾ. ಐ . ದೇವೇಂದ್ರನ್‌ ಬೆಂಗಳೂರಿನ ಮೈಸೂರು ಸಕ್ಕರೆ ಕಂಪೆನಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿ ವೀರಭದ್ರಾಚಾರಿ, ಬೆಂಗಳೂರಿನ ಪೌರಾಡಳಿತ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಯಾಗಿ ಅಶೋಕ್‌ ವಿ. ಡೇವಿಡ್‌, ಬೆಂಗಳೂರು ನಗರಾಭಿವೃದ್ಧಿ ಆಡಳಿತ ನಿರ್ದೇಶಕರಾಗಿ ಕೆ. ಎಸ್‌. ಮಂಜುನಾಥ್‌ ವರ್ಗವಾಗಿದ್ದಾರೆ.

ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ ಆದೇಶದ ಪ್ರಕಾರ ಆರು ಮಂದಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಪಿ. ಪ್ರೇಮ, ಗುಲ್ಬರ್ಗಾ, ಡಿ.ಎ. ವೆಂಕಟೇಶ್‌ ಕೊಳ್ಳೇಗಾಲ, ಎ.ಎಂ. ಅಣ್ಣಯ್ಯ ಹುಣಸೂರು ವನ್ಯ ಜೀವಿ ವಿಭಾಗ, ಶಿವರಾಜ ಸಿಂಗ್‌-ಸಾಗರ, ಅಭಯ್‌ ಸಿಂಗ್‌ - ಶಿರಸಿಯ ಯೋಜನಾ ನಿರ್ವಹಣಾ ಘಟಕ, ವೀರೇಂದ್ರ ಸಿಂಗ್‌- ಬಿಜಾಪುರ ಜಿಲ್ಲಾ ಪಂಚಾಯತ್‌, ಎಚ್‌.ಎಸ್‌. ಮೂರ್ತಿ- ಜಿಲ್ಲಾ ಪಂಚಾಯತ್‌ ಮಂಡ್ಯ .

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X