Get Updates
Get notified of breaking news, exclusive insights, and must-see stories!

ಹೊನ್ನವಳ್ಳಿಯಲ್ಲಿ ಭೂಕುಸಿತ: 150 ಕುಟುಂಬ-ಗಳು ಬೀದಿ-ಪಾ-ಲು

ತಿಪಟೂರು : ಕಳೆದ ಒಂದು ವಾರದಲ್ಲಿ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಸುರಿದ ಸತತ ಮಳೆಯಿಂದಾಗಿ ಅಂತ-ರ ಜಲ ಮಟ್ಟ ಹೆಚ್ಚಾಗಿ ಭೂಕುಸಿತ ಮತ್ತು ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗಿವೆ.

ಹೊನ್ನವಳ್ಳಿಯ ಸುಮಾರು 500 ವರ್ಷಗಳಷ್ಟು ಹಳೆಯದಾದ ಕೈಲಾಸೇಶ್ವರ ದೇವಾಲಯದ 30 ಅಡಿ ಎತ್ತರದ ಗೋಪುರ ಕುಸಿದುಬಿದ್ದು ದೇವಾಲಯದೊಳಗೆ ನೀರು ತುಂಬಿಕೊಂಡಿದೆ. ಹಳ್ಳಿಯ ಐತಿಹಾಸಿಕ ಕೋಟೆ, ಗಣೇಶ ದೇವಾಲಯವೂ ಕುಸಿದು ಬಿದ್ದಿದೆ. ನೇಕಾರಿಕೆ ಮಾಡುತ್ತಿರುವವರ ಕೈಮಗ್ಗ ಗುಂಡಿಯಲ್ಲಿ ನೀರು ತುಂಬಿದ್ದು , ತುತ್ತು ಕೊಡುವ ವೃತ್ತಿಗೇ ಮಳೆ ಕೊಡಲಿಯೇಟು ಹಾಕಿದೆ. ನೆಲದ ಮಣ್ಣು ಅತಿ ಮೃದುವಾಗಿದ್ದು ಹಾರೆ ಹಾಕಿದ ತಕ್ಷಣ ನಾಲ್ಕೈದು ಅಡಿ ಹೂತು ಹೋಗುತ್ತದೆ. ಊರಿನ ಕೆಲವು ಮನೆಯಾಳಗೆ ಹೊಂಡಗಳು ಕಾಣಿಸಿಕೊಂಡಿದ್ದು , ಅದರಲ್ಲಿ ನೀರು ತುಂಬಿಕೊಂಡಿದೆ.

ಮನೆ ಕಳೆದುಕೊಂಡಿರುವವರಿಗೆ ಪರಿಹಾರ ಕಾರ್ಯ ಸರಿಯಾದ ರೀತಿಯಲ್ಲಿ ನಡೆದಿಲ್ಲ. ಅಲ್ಲದೆ ಭೂಕುಸಿತದ ಹಿಂದಿರುವ ಕಾರಣ ಹುಡುಕುವ ಪ್ರಾಮಾಣಿಕ ಅಧ್ಯಯನ ನಡೆದಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಸುಮಾರು 90 ವರ್ಷಗಳಿಗೆ ಹಿಂದೆ ಇಲ್ಲಿ ಪ್ಲೇಗ್‌ ರೋಗ ಕಾಣಿಸಿಕೊಂಡು, ಜನ ಊರು ಬಿಟ್ಟು ಹೊರಡುವ ಸಂದರ್ಭದಲ್ಲಿ ತಮ್ಮ ಪಾತ್ರೆ ಪಗಡಿಗಳನ್ನು ಹೂಳಿಟ್ಟಿದ್ದು, ನಂತರ ಆ ಹೊಂಡಗಳು ಹಾಗೇ ಉಳಿದುಕೊಂಡಿರಬಹುದು, ಅಥವ ಪಾಳೆಗಾರರು ಆಹಾರ ದಾಸ್ತಾನು ಮಾಡಲು ದೊಡ್ಡ ಗೇವುಗಳನ್ನು ನಿರ್ಮಿಸಿದ್ದು , ಆ ಹೊಂಡಗಳಲ್ಲಿ ನೀರು ನಿಂತಿರುವ ಪರಿಣಾಮ ಮಣ್ಣು ಅತಿ ಮೃದುವಾಗಿರಬಹುದು ಎಂದು ಶಂಕಿಸಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+