Get Updates
Get notified of breaking news, exclusive insights, and must-see stories!

ಸ್ವಯಂ ಆಸ್ತಿ ತೆರಿಗೆ ಪಾವತಿ ಕಾಲಾವಧಿ ವಿಸ್ತರಣೆ

ಬೆಂಗಳೂರು : ಸಾರ್ವಜನಿಕರ ಒತ್ತಾಯದ ಮೇರೆಗೆ ಬೆಂಗಳೂರು ಮಹಾನಗರಪಾಲಿಕೆಯ ಆಸ್ತಿ ತೆರಿಗೆ ಪಾವತಿ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಮೇಯರ್‌ ರಾಮಚಂದ್ರಪ್ಪ ತಿಳಿಸಿದ್ದಾರೆ.

ದಿನಾಂಕವನ್ನು ನವೆಂಬರ್‌ ಒಂದರಿಂದ 30 ದಿನಗಳ ಕಾಲ ವಿಸ್ತರಿಸಲಾಗಿದ್ದು, ಈ ಸಂಬಂಧ ಪುಸ್ತಕಗಳನ್ನು ಮರುಮುದ್ರಣ ಮಾಡಲಾಗುತ್ತಿದೆ. ಪುಸ್ತಕಗಳು ನಾಗರಿಕರಿಗೆ ನವೆಂಬರ್‌ ಒಂದರಿಂದ ದೊರೆಯಲಿವೆ. ಸಂಬಂಧಿಸಿದವರು ಆಯಾ ಪ್ರದೇಶದ ಕಂದಾಯಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.

ತೆರಿಗೆ ಪದ್ಧತಿ ಗೊಂದಲ : ಈ ಪದ್ಧತಿಯನ್ನು ವಿರೋಧಿಸಿ ಕನ್ನಡ ಚಳುವಳಿ ಕೇಂದ್ರ ಕೂಟದ ಸದಸ್ಯರಾದ ವಿಶ್ವನಾಥ್‌, ದೇವನಾಥ್‌, ಲಕ್ಷ್ಮೀನಾರಾಯಣ ಅವರು ಮೇಯರ್‌ ರಾಮಚಂದ್ರಪ್ಪ ಮತ್ತು ಆಯುಕ್ತ ಜೈರಾಜ್‌ ಅವರತ್ತ ಕರಪತ್ರಗಳನ್ನು ಎಸೆದು ಮಾಸಿಕ ಸಭೆಯಲ್ಲಿ ಗೊಂದಲ ಎಬ್ಬಿಸಿದ ಘಟನೆ ಬುಧವಾರ ನಡೆಯಿತು.

ಸದಸ್ಯರ ವರ್ತನೆಯಿಂದ ಸಭೆಯನ್ನು ಮುಂದೂಡಲಾಯಿತು. ಘೋಷಣೆ ಕೂಗಿದ ಸದಸ್ಯರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತೆಂದು ನಂತರ ರಾಮಚಂದ್ರಪ್ಪ ತಿಳಿಸಿದ್ದಾರೆ.

ಮಾರಾಮಾರಿ : ನಗರಪಾಲಿಕೆ ಜಾರಿಗೆ ತಂದಿರುವ ವಾಹನ ನಿಲುಗಡೆ ಶುಲ್ಕ ವ್ಯವಸ್ಥೆ ವಿರೋಧಿಸಿ ಬಿಜೆಪಿ ಸದಸ್ಯರು ಸಭೆ ಆರಂಭದಲ್ಲಿ ಧರಣಿ ಕುಳಿತಿದ್ದನ್ನು ಕಾಂಗ್ರೆಸ್‌ ಶಾಸಕರು ವಿರೋಧಿಸಿದರು. ಆಗ ಆಡಳಿತ ಪಕ್ಷವಾದ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮುಕಿ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿ ಮಾರಾಮಾರಿಗೆ ಇಳಿದರು.

ಬಿಜೆಪಿ ಪೆಟ್ರೋಲ್‌ ಬೆಲೆ ಏರಿಸಿ ಜನರಿಗೆ ತೊಂದರೆ ಉಂಟು ಮಾಡಿರುವಾಗ ವಾಹನ ಶುಲ್ಕದಂತಹ ಚಿಕ್ಕ ವಿಷಯವಾಗಿ ಧರಣಿ ನಡೆಸುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಸದಸ್ಯರು ಆಕ್ಷೇಪಿಸಿದಾಗಿ ಗೊಂದಲ ಪ್ರಾರಂಭವಾಯಿತು.

(ಇನ್ಫೋ ವರದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+