ಕುರಿಯ ಉಸ್ತುವಾರಿಗೆ ತೋಳಗಳನ್ನು ನೇಮಿಸಿದ ಕತೆಯು !
ಚೆನ್ನೈ: ರಾಜ್ ಬಿಡುಗಡೆಗೆ ಐದನೇ ಯತ್ನವಾಗಿ ಹೊರಟ ಗೋಪಾಲ್ ಅವರನ್ನು ಸೇರಿಕೊಂಡ ತಮಿಳು ರಾಷ್ಟ್ರೀಯವಾದಿ ಆಂದೋಲನದ ಪಿ. ನೆಡುಮಾರನ್ ಹಾಗೂ ಸುಕುಮಾರನ್ ಅವರ ಹಿನ್ನಲೆಗಳು ತಮಿಳುನಾಡು ವಿರೋಧಪಕ್ಷಗಳಿಗೆ ಆಡಳಿತಾರೂಡ ಸರಕಾರವನ್ನು ಟೀಕಿಸಲು ಉಗ್ರ ಕಾರಣಗಳಾಗಿವೆ.
ಕಾಡುಗಳ್ಳ ವೀರಪ್ಪನ್ನೊಂದಿಗೆ ಎಲ್ಟಿಟಿಇ ಸೇರಿದಂತೆ ಇತರ ಕೆಲವು ಪ್ರತ್ಯೇಕತಾವಾದಿಗಳ ಸಖ್ಯವಿದೆ ಎಂಬ ಅಂಶದ ಬಗ್ಗೆ ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ, ಸಂಧಾನಕಾರರನ್ನು ಕುರಿತು ಕೇಂದ್ರದ ವಿರೋಧಪಕ್ಷದ ನಾಯಕಿ ಸೋನಿಯಾಗಾಂಧಿ ಅಪಸ್ವರ ಎತ್ತಿದ್ದಾರೆ. ರಾಜ್ ಅಪಹರಣದ ಜೊತೆ ತಮಿಳು ರಾಷ್ಟ್ರೀಯವಾದಿಗಳ ಮತ್ತು ಸಂಧಾನಕಾರರ ಇತಿಹಾಸಗಳು ವರ್ತಮಾನದ ಸಮಾಚಾರಗಳಂತೆ ಬಿಕರಿಯಾಗತೊಡಗಿವೆ.
ಹೀರೋ ಪ್ರಭಾಕರನ್ : ಎಲ್ಟಿಟಿಈ ನಾಯಕ ವೇಲುಪಿಳ್ಳೈ ಪ್ರಭಾಕರನ್ ಚಿತ್ರಗಳು ನಕ್ಕಿರನ್ ಪತ್ರಿಕೆಯ ಕಛೇರಿಯ ಗೋಡೆಗಳ ಮೇಲೆ ರಾರಾಜಿಸತೊಡಗಿವೆ. ಭಾರತದಲ್ಲಿ ಎಲ್ಟಿಟಿಈ ಚಟುವಟಿಕೆಗಳನ್ನು ನಿಷೇಧಿಸಿದ್ದರೂ ಪ್ರಭಾಕರನ್ ತಮಿಳು ರಾಷ್ಟ್ರೀಯವಾದಿಗಳೂ ಸೇರಿದಂತೆ ಅನೇಕರ ಪಾಲಿನ ಹೀರೋ ಆಗಿ ಮುಂದುವರಿದಿದ್ದಾನೆ.
ಇದಕ್ಕೆ ಸ್ಥಳೀಯ ಮಾಧ್ಯಮಗಳೂ ಹೊರತಲ್ಲ. ವೀರಪ್ಪನ್ ಹೆಸರೂ ಕೂಡಾ ಇದೇ ರೀತಿ ಚಾಲ್ತಿಯಲ್ಲಿದೆ.
ತಮಿಳು ರಾಷ್ಟ್ರೀಯವಾದಿಗಳು ಇವತ್ತು ಅಪಹರಣಕಾರ ಮತ್ತು ಸಂಧಾನಕಾರರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದಾರೆ. ಪೋಲೀಸರ ಪ್ರಕಾರ ಅಪಹರಣಕಾರರೊಂದಿಗೆ ಎರಡು ತಮಿಳು ರಾಷ್ಟ್ರೀಯವಾದಿ ಸಂಘಟನೆಗಳಾದ ತಮಿಳುನಾಡು ಲಿಬರೇಷನ್ ಆರ್ಮಿ(ಟಿಎನ್ಎಲ್ಎ) ಮತ್ತು ತಮಿಳುನಾಡು ರಿಟ್ರೆೃವಲ್ ಫೋರ್ಸ್ (ಟಿಎನ್ಆರ್ಎಫ್)ನ 16 ಮಂದಿ ಇದ್ದಾರೆ.
ಇತಿಹಾಸ : ಟಿಎನ್ಎಲ್ಎ ತಮಿಳುನಾಡಿನ ಕುಡ್ಡಲೂರ್, ಚಿದಂಬರಮ್ ಮತ್ತು ಪೆರಂಬದೂರು ಜಿಲ್ಲೆಗಳಲ್ಲಿ ಹೆಚ್ಚು ಚಟುವಟಿಕೆಗಳನ್ನು ಹೊಂದಿದೆ. ಈ ಟಿಎನ್ಎಲ್ಎಯ ಮೊದಲ ನಾಯಕ ಆಂಧ್ರಪ್ರದೇಶದ ಪೀಪಲ್ಸ್ ವಾರ್ಗ್ರೂಪ್(ಪಿಡಬ್ಲೂಜಿ)ಗೆ ಸೇರಿದವನು. ಕಲ್ಯಾಪೆರುಮಾಳ್ ಎಂಬ ಈತ ಮೊದಲು ಶಾಲಾ ಶಿಕ್ಷಕನಾಗಿದ್ದ. 1970ರ ದಶಕದಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಇವನ ಮಗನೊಟ್ಟಿಗೆ ಕೊಲೆ ಮೊಕದ್ದಮೆಯಲ್ಲಿ ಬಂಧಿಸಲಾಗಿತ್ತು. ತನ್ನ ಮನೆಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಈತ ಮೂವರ ಸಾವಿಗೆ ಕಾರಣನಾಗಿದ್ದ.
ಸರಕಾರದ ನೆರವಿನಿಂದ 1973ರಲ್ಲಿ ಮರಣದಂಡನೆಯಿಂದ ಪಾರಾದ ಈತ ವೆಲ್ಲೂರಿನಲ್ಲಿ ಜೈಲುವಾಸ ಅನುಭವಿಸಿ, ಹೊರ ಬಂದ ನಂತರ ತಮಿಳು ರಾಷ್ಟ್ರೀಯವಾದಿ ಆಂದೋಲನಕ್ಕೆ ಕಾರಣನಾದ. ಈಗ 76ರ ಅಂಚಿನಲ್ಲಿರುವ ಆತನ ಕನಸು ಸ್ವತಂತ್ರ ತಮಿಳು ರಾಷ್ಟ್ರ.
ಈತನ ಸಹಚರ ತಮಿಳರಸನ್ಎಂಬ ಇನ್ನೊಬ್ಬ ಪಿಡಬ್ಲೂಜಿ ನಾಯಕ, ರಾಜಕೀಯವನ್ನು ತಮಿಳುರಾಷ್ಟ್ರೀಯವಾದಿ ಆಂದೋಲನಕ್ಕೆ ಥಳುಕು ಹಾಕಿದ ಖ್ಯಾತಿ ಹೊಂದಿದ್ದಾನೆ. 1985ರಲ್ಲಿ ಜೈಲಿನಿಂದ ಹೊರಬಂದ ಕಲ್ಯಾಪೆರುಮಾಳ್ ಮತ್ತು ತಮಿಳರಸನ್ ಅವರನ್ನು ಸ್ವತಂತ್ರ ತಮಿಳು ರಾಷ್ಟ್ರದ ಕರೆ ನೀಡಿದ ಎಲ್ಟಿಟಿಈ ಹೇಳಿಕೆಗೆ ಬೆಂಬಲ ನೀಡಿದ ಕಾರಣಕ್ಕೆ ಪಿಡಬ್ಲೂಜಿಯಿಂದ ಅಮಾನತುಗೊಳಿಸಲಾಯಿತು.
ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications