ಭ್ರಷ್ಟಾ-ಚಾರಕ್ಕೆ ಇಂಟರ್ನೆಟ್ ಬ್ಯಾಂಕಿಂಗ್ ಇಂಬು : ಡಿ.ಎಂ. ನಂಜುಂಡ-ಪ್ಪ ಆತಂಕ
ಮೈಸೂರು : ಇಂಟರ್ನೆಟ್ ಬ್ಯಾಂಕಿಂಗ್ನಿಂದಾಗಿ ಭ್ರಷ್ಟಾಚಾರ ಮತ್ತು ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞ ಹಾಗೂ ರಾಜ್ಯದ ಯೋಜನಾ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಡಿ. ಎಂ. ನಂಜುಂಡಪ್ಪ ಎಚ್ಚರಿಸಿದ್ದಾರೆ.
ಪ್ರಸ್ತುತ ಪ್ರಾ-ದೇ-ಶಿ-ಕ ಅಸಮತೋಲನ ಅಧ್ಯಯನ ಸಮಿತಿಯ ಅಧ್ಯಕ್ಷರಾಗಿರುವ ನಂಜುಂಡಪ್ಪ -ನ-ವ-ರು, ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸುಧಾರಣೆ ’ ಕುರಿತ ವಿಚಾರ ಸಂಕಿರಣದಲ್ಲಿ ಸೋಮ-ವಾ-ರ ಮಾತನಾಡುತ್ತಿದ್ದರು. ಇಂಟರ್ನೆಟ್ ಬ್ಯಾಂಕಿಂಗ್ನಲ್ಲಿ ವ್ಯವಹಾರ ಮೌಲ್ಯಗಳು ಕಡಿಮೆಯಾಗಿದ್ದು , ಈ ವ್ಯವಸ್ಥೆ ಹೀಗೆಯೇ ಮುಂದುವರೆದರೆ, ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುವುದಲ್ಲದೆ ಮಾನವ ಸಂಪನ್ಮೂಲಕ್ಕೆ ಧಕ್ಕೆಯಾಗುತ್ತದೆ ಎಂದರು.
ಉತ್ತ-ಮ ಬ್ಯಾಂಕಿಂಗ್ ವ್ಯವಹಾರಕ್ಕೆ ಭಾರತ ವಿಶ್ವದಲ್ಲಿಯೇ ಗುರುತಿಸಲ್ಪಟ್ಟಿದೆ. ಉತ್ತಮ ಗ್ರಾಹಕ ಸೇವೆ ನೀಡುವ ನಿಟ್ಟಿನಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರತೀಯ ಬ್ಯಾಂಕ್ಗಳಿಗೆ ಇನ್ನಷ್ಟು ಸ್ವಾಯತ್ತತೆ ಬೇಕು ಎಂದ ನಂಜುಂಡಪ್ಪ ಅವರು, ಮೈಸೂರು ಬ್ಯಾಂಕ್ ಶಾಖೆಯನ್ನು ಮೈಸೂರು ವಿವಿಯ ಆವರಣದಲ್ಲಿ ಉದ್ಘಾಟಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಡಿಜಿಎಂ ಜಿ. ರಾಮಮೋಹನ ರಾವ್ ಸಮಾರಂಭದಲ್ಲಿ ಹಾಜ-ರಿ-ದ್ದ-ರು.
(ಯುಎನ್ಐ)