ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರು-ಕ-ಟ್ಟೆ-ಯಲ್ಲಿ ಕೆಎ-ಸ್‌-ಡಿ-ಎ-ಲ್‌ ನಾಗಾ-ಲೋ-ಟ : 17 ಕೋಟಿ ಲಾಭ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ(ಕೆಎಸ್‌ಡಿಎಲ್‌ ) 1999-2000 ನೇ ಸಾಲಿನಲ್ಲಿ 150 ಕೋಟಿ ರೂಪಾಯಿಗಳ ಮಾರಾಟ ದಾಖಲೆಯಾಂದಿ-ಗೆ 17 ಕೋಟಿ ರುಪಾ-ಯಿ-ಗ-ಳ ನಿವ್ವ-ಳ ಲಾಭ ಗಳಿ-ಸಿ-ದ್ದು, ಮುಂದಿನ ದಿನಗಳಲ್ಲಿ ಪಡಿತರದೊಂದಿಗೆ ಟೂಥ್‌ ಪೇಸ್ಟ್‌ ನೀಡುವ ಯೋಜನೆಯನ್ನು ಆರಂಭಿಸಲಿದೆ ಎಂ-ದು ಕೆ-ಎ-ಸ್‌-ಡಿ-ಎ-ಲ್‌ ಅಧ್ಯಕ್ಷ ಎನ್‌. ವಿಶ್ವನಾಥನ್‌ ಹೇಳಿದ್ದಾರೆ.

ಐವರಿ ಟೂಥ್‌ ಪೇಸ್ಟ್‌ : ಕಂಪೆನಿಯು ‘ಐವರಿ’ ಟೂಥ್‌ ಪೇಸ್ಟ್‌ ನ್ನು ಉತ್ಪಾದಿಸಲಾರಂಭಿಸಿದ್ದು , ಇದನ್ನು ನ್ಯಾಯ ಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡುವ ಕುರಿತು ಕೇಂದ್ರ ಸರಕಾರದೊಂದಿಗೆ ಚ-ರ್ಚಿ-ಸಲಾಗುತ್ತಿದೆ ಎಂದು ವಿಶ್ವನಾಥನ್‌ ಹೇಳಿ-ದ-ರು. ಖಾಸಗಿ ಕಂಪೆನಿಗಳಿಗೆ ಸ್ಪರ್ಧೆಯಾಡ್ಡಲು ಮತ್ತು ಬಡವರಿಗೆ ಉತ್ತಮ ಗುಣಮಟ್ಟದ ಟೂಥ್‌ ಪೇಸ್ಟ್‌ ಒದಗಿಸುವ ಉದ್ದೇಶದಿಂದ ಈ ಟೂಥ್‌ ಪೇಸ್ಟ್‌ನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲು ಉದ್ದೇಶಿಸಲಾಗಿದೆ ಎಂದು ಬು-ಧ-ವಾ-ರ ಸುದ್ದಿ-ಗಾ-ರರಿ-ಗೆ ಅವ-ರು ತಿಳಿ-ಸಿ-ದ-ರು.

ಕಳೆದೆರಡು ವರ್ಷಗಳಲ್ಲಿ ಮೈಸೂರು ಸ್ಯಾಂಡಲ್‌ ಗೋಲ್ಡ್‌, ಮೈಸೂರು ಸ್ಯಾಂಡಲ್‌ ಬೇಬಿ ಪೌಡರ್‌ ಹಾಗೂ ಬೇಬಿ ಸೋಪ್‌, ಮತ್ತು 11 ಬೇರೆ ಬೇರೆ ಆಕರ್ಷಣೀಯ ಹೆಸರಿನ ಅಗರ ಬತ್ತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಮೈಸೂರು ಸ್ಯಾಂಡಲ್‌ ಸ್ಯಾಚೆಟ್‌ಗಳನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಶ್ಯಾಂಪೂ ಮಾರುಕಟ್ಟೆ ಗೆ ಪ್ರವೇಶಿಸಿದ್ದೇ-ವೆ. ಮೈಸೂರು ಸ್ಯಾಂಡಲ್‌ ಟಾಲ್ಕ್‌ನೊಂದಿಗೆ ಕಂಪೆನಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಎರಡು ವರ್ಷಗಳಲ್ಲೇ ಶೇಕಡಾ 10ರಷ್ಟು ಮಾರುಕಟ್ಟೆ ಪಾಲು ಪಡೆದಿದೆ ಎಂದು ಸುದ್ದಿ-ಗೋ-ಷ್ಠಿ-ಯ-ಲ್ಲಿ ಹಾಜ-ರಿ-ದ್ದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪ. ಗಣೇಶನ್‌ ಹೇಳಿದ-ರು.

ಐಎಸ್‌ಓ-9002 ಮತ್ತು ಐಎಸ್‌ಓ -14001 ಪ್ರಮಾಣ ಪತ್ರ ಗಳಿಸಿರುವ ಏಕೈಕ ಸರಕಾರಿ ಕಂಪೆನಿ ಕೆಎ-ಸ್‌-ಡಿ-ಎ-ಲ್‌-ನ-ದಾಗಿದೆ. ದಕ್ಷಿಣ ಅಮೆರಿಕಾ, ಗಲ್ಫ್‌ ದೇಶಗಳಿಗೆ ತನ್ನ ಉತ್ಪಾದನೆಗಳನ್ನು ರಫ್ತು ಮಾಡುವ ಮೂಲಕ ಕಳೆದ ವರ್ಷ 3 ಕೋಟಿ ರೂಪಾಯಿ ಆದಾಯಗಳಿಸಿದ್ದರೆ, ಈ ಬಾರಿ ಕಂಪೆನಿಯ ಗುರಿ 5 ಕೋಟಿ ರೂಪಾಯಿ ಎಂದು ಗಣೇಶನ್‌ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X